HEALTH TIPS

ವಯನಾಡ್ ದುರಂತ: ಮುಂದೇನು? ಅವರು ಕೇಳುತ್ತಾರೆ.

               ಕಲ್ಪಟ್ಟಾ: ಮುಂದೇನು? ಭೂಕುಸಿತ ಸಂಭವಿಸಿ ಒಂದು ವಾರದ ಕಳೆದಿದ್ದು, ಪರಿಹಾರ ಶಿಬಿರದಲ್ಲಿರುವ ಎಲ್ಲರ ಮುಖದಲ್ಲೂ ಇದೇ ಪ್ರಶ್ನೆ.

              ಎಲ್ಲರೂ ಕೈಗೆ ಸಿಕ್ಕಿದ ಬಟ್ಟೆಯೊಂದಿಗೆ ಬಂದವರು. ಬೇರೆ ಯಾವುದೂ ಕೈಯಲ್ಲಿಲ್ಲ. ಕೆಲವು ಶಿಬಿರಗಳು ಮಾತ್ರ ಕಳೆದ ಕೆಲವು ದಿನಗಳಲ್ಲಿ ರಕ್ಷಣಾ ಕಾರ್ಯಕರ್ತರ ವಾಹನಗಳಲ್ಲಿ ಮತ್ತು ಕಿಲೋಮೀಟರ್‍ಗಳಷ್ಟು ನಡೆದು ಚುರಲ್‍ಮಲಾವನ್ನು ತಲುಪಿದವು. ಅವರು ಆ ಸ್ಥಳವನ್ನು ನೋಡಲು ಬಯಸಿದ್ದರು. ಬಹುತೇಕರೂ ತಮ್ಮ ಮನೆಯಿದ್ದ ಸ್ಥಳ ಪತ್ತೆಹಚ್ಚಲಾಗದೆ ಆನತಮಸ್ತಕರಾದರು.

               ಪ್ರವಾಹದಿಂದ ತಪ್ಪಿಸಿಬಂದವರು  ಮತ್ತು ವಿಪತ್ತಿನಿಂದ ವಲಸೆ ಬಂದವರೆಲ್ಲರೂ ಇದರಲ್ಲಿ ಸೇರಿದ್ದಾರೆ. ರಾತ್ರೋರಾತ್ರಿ ನೂರಾರು ಮಂದಿ ಅನಾಥರಾದರು. ಆ ಕರಾಳ ರಾತ್ರಿ  ನೆನಪಿಗಾಗಿ ಏನನ್ನೂ ಬಿಡದೆ ಸಾಗಿಹೋಗಿದೆ.  ಅವರು ಶಿಬಿರಕ್ಕೆ ಹಿಂತಿರುಗಿ ತಮ್ಮ ಹಿಂದೆ ತಲೆಯೆತ್ತಿ ನಿಂತಿರುವ ಚೆಂಬ್ರಾ ಪರ್ವತಗಳನ್ನು ನಿಸ್ತೇಜರಾಗಿ ನೋಡುತ್ತಾ ನಿಟ್ಟುಸಿರು ಬಿಡುತ್ತಾರೆ.

               ನಮಗೆಲ್ಲ ಗೊತ್ತು. ಯಾರೂ ಶಾಶ್ವತರಲ್ಲ. ಆದರೆ, ಉರಿರಿರುವ ವರೆಗೂ ಸ್ವಾವಲಂಬಿಗಳಾಗಿ, ನೆಮ್ಮದಿಯಯಿಂದ ಬದುಕಲು ಇನ್ನು ಹೊಸತರಿಂದ ಆರಂಭಿಸಬೇಕಲ್ಲವೇ ಎಂದು ಯೋಚಿಸುತ್ತಿದ್ದಾರೆ ಎಂಬುದು ತಿಳಿದುಬರುತ್ತದೆ. 

               ಸ್ಥಳೀಯರಲ್ಲದೆ, ನೂರಾರು ರಾಜ್ಯೇತರ ಕಾರ್ಮಿಕರು ಸಹ ಪರಿಹಾರ ಶಿಬಿರಗಳಲ್ಲಿದ್ದಾರೆ. ಮೊದಲು ಅಲ್ಲಿದ್ದ ಅನೇಕರು ನಾಪತ್ತೆಯಾಗಿದ್ದರು. ಸರ್ಕಾರದ ಅಧಿಕೃತ ಅಂದಾಜಿನ ಪ್ರಕಾರ ಮೂವರು ಅತಿಥಿ ಕಾರ್ಮಿಕರು ನಾಪತ್ತೆಯಾಗಿದ್ದಾರೆ ಮತ್ತು ಒಬ್ಬರು ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಕರ್ತರು ನಾಪತ್ತೆಯಾದವರ ಕುಟುಂಬ ಸದಸ್ಯರಿಗೆ ಉತ್ತರಿಸಲು ಸಹ ಸಾಧ್ಯವಾಗುತ್ತಿಲ್ಲ. ಇವತ್ತಲ್ಲದಿದ್ದರೂ ನಾಳೆ ಜೀವಂತವಾಗಿ ಲಭಿಸಬಹುದು ಎಂಬ ನಿರೀಕ್ಷೆಯಲ್ಲಿ ಸ್ಥಳೀಯ ಸಂಬಂಧಿಕರು ಇದ್ದಾರೆ.

                 ಮಲೆನಾಡಿನ ಮೇಲೆ ಹಲವು ವರ್ಷ ದುಡಿದು ದುಡಿದು ದುಡಿದಿದ್ದನ್ನೆಲ್ಲಾ ಈಗ ಧರೆಯೊಳಗೆ ಸೇರಿಕೊಂಡಿದೆ. ಈಗ ಮನೆ ನಿರ್ಮಿಸುವುದು ಹೇಗೆ? ಇಲ್ಲಿ ಹೇಗೆ ವಾಸಿಸಬಹುದು? ಇದು ಇಲ್ಲಿನ ಜನರ ಆತಂಕ. ವಾಸಕ್ಕೆ ನಿವೇಶನ ಬೇಕು, ನಿರಾಶ್ರಿತರಿಗೆ ನೆಲೆ ಕಂಡುಕೊಳ್ಳಲು ನೆಲವೂ ಬೇಕು, ಇದು ಪರಿಹಾರ ಶಿಬಿರದಲ್ಲಿರುವ ಜನರ ಹಕ್ಕು ಮತ್ತು ಬೇಡಿಕೆಯಲ್ಲ, ಅಧಿಕಾರಿಗಳಿಗೆ ಮನವಿ..ಎಂದು ಬತುತೇಕರು ಹೇಳುತ್ತಿದ್ದಾರೆ..



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries