ಬದಿಯಡ್ಕ: ಎಡನೀರು ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭ ಸಾಂಸ್ಕøತಿಕ ವೇದಿಕೆಯಲ್ಲಿ ಜರಗುತ್ತಿರುವ ತಾಳಮದ್ದಳೆ ನವಾಹದ ಅಂಗವಾಗಿ ಸೋಮವಾರ ಇಂದ್ರಜಿತು ಕಾಳಗ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಹೊಸಮೂಲೆ ಗಣೇಶ ಭಟ್ಟ, ಪುತ್ತೂರು ರಮೇಶ ಭಟ್ಟ ಭಾಗವತಿಕೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ಟ ಹಾಗೂ ಪಿಟಿ ಜಯರಾಮ ಭಟ್ಟ ಚೆಂಡೆ ಮದ್ದಳೆಯಲ್ಲಿ, ನಿಶ್ವಿತ್ ಜೋಗಿ ಜೋಡುಕಲ್ಲು ಚಕ್ರತಾಳದಲ್ಲಿ ಸಹಕರಿಸಿದರು. ಇಂದ್ರಜಿತುವಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಶ್ರೀರಾಮನಾಗಿ ಭಾಸ್ಕರ ರೈ ಕುಕ್ಕುವಳ್ಳಿ, ಹನೂಮಂತನಾಗಿ ರಾಧಾಕೃಷ್ಣ ಕಲ್ಚಾರು, ಮಾಯಾಸೀತೆಯಾಗಿ ಸಂತೋಷ್ ಹಿಲಿಯಾಣ, ಜಾಂಬವಂತನಾಗಿ ಸುರೇಶ ಕುದ್ರೆಂತ್ತಾಯ, ವಿಭೀಷಣನಾಗಿ ಅವಿನಾಶ್ ಶೆಟ್ಟಿ ಉಬರಡ್ಕ, ಲಕ್ಷ್ಮಣನಾಗಿ ಪೆರ್ಮುದೆ ಜಯಪ್ರಕಾಶ ಶೆಟ್ಟಿ ತಮ್ಮ ಪಾತ್ರಕ್ಕೆ ತಕ್ಕ ನಿರ್ವಹಣೆಯಲ್ಲಿ ಗಮನಸೆಳೆದರು.