ಕಾಸರಗೋಡು: ಕೇರಳದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಹಾಗೂ ಅತಿ ಭೀಕರ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ವಯನಾಡಿನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಕಾಸರಗೋಡಿನ 40ಮಂದಿ ಪೊಲೀಸರನ್ನು ವಯನಾಡಿಗೆ ಕಳುಹಿಸಿಕೊಡಲಾಗಿದೆ.
ಹೊಸದುರ್ಗ ಠಾಣೆ ಎಸ್.ಐ ಎಂ.ಟಿ.ಪಿ ಸೈನುದ್ದೀನ್, ಟಿ.ಪಿ ಮಧು, ನೀಲೇಶ್ವರದ ರತೀಶನ್ ತೃಕ್ಕರಿಪುರ ನೇತೃತ್ವದ ತಂಡ ರಕ್ಷಣಾ ಕಾರ್ಯಕ್ಕೆ ತೆರಳಿದೆ. ಕಾಸರಗೋಡು ಉಪ ವಿಭಾಗದ ಹತ್ತು, ಬೇಕಲ-ಹೊಸದುರ್ಗ ಪೊಲೀಸ್ ಉಪ ವಿಭಾಗದ 30ಮಂದಿ ಒಳಗೊಂಡ0ತೆ ಒಟ್ಟು 40ಮಂದಿ ತಂಡದಲ್ಲಿದ್ದಾರೆ.