ಮಂಜೇಶ್ವರ: ಇತಿಹಾಸ ಪ್ರಸಿದ್ಧ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸೇವಾಸಮಿತಿಗೆ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಸೇರಿದ ಸೇವಾಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸತೀಶ್ಚಂದ್ರ ರೈ ದೇರಂಬಳ ಆಯ್ಕೆ ಗೊಂಡಿದ್ದು ಉಳಿದಂತೆ ಗೌರವಾಧ್ಯಕ್ಷರಾಗಿ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಉಪಾಧ್ಯಕ್ಷರುಗಳಾಗಿ ಪುμÀ್ಪರಾಜ ಶೆಟ್ಟಿ ತಲೇಕಳ, ರವೀಂದ್ರ ರೈ ಕೋಡಿ, ಅರವಿಂದಾಕ್ಷ ಭಂಡಾರಿ ದಡ್ಡಂಗಡಿ, ಮೋನಪ್ಪ ಪುಜಾರಿ ಕಲ್ಕಾರ್, ಶಂಕರನಾರಾಯಣ ಭಟ್ ಮುಂದಿಲ, ಪ್ರಧಾನ ಕಾರ್ಯದರ್ಶಯಾಗಿ ಜಯರಾಮ ಚಿನಾಲ ಕೋಶಾಧಿಕಾರಿಯಾಗಿ ಸದಾಶಿವ ಶೆಟ್ಟಿ ಪಳ್ಳತ್ತಡ್ಕ, ಜತೆ ಕಾರ್ಯದರ್ಶಿಯಾಗಿ ಅಶ್ವಿನ್ ಬುಡ್ರಿಯ, ನವೀನ್ ಮದಂಗಲ್ಲು, ಸದಾನಂದ ಕೋಡಿ ಹಾಗೂ ಇಪ್ಪತ್ತೊಂದು ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಕ್ಷೇತ್ರದ ಆಡಳಿತ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಡಾ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ, ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಉಪಸ್ಥಿತರಿದ್ದರು. ಸೇವಾಸಮಿತಿ ಕಾರ್ಯದರ್ಶಿ ಪುμÀ್ಪರಾಜ ಶೆಟ್ಟಿ ತಲೇಕಳ ಸ್ವಾಗತಿಸಿ ಮಹಾಲಿಂಗೇಶ್ವರ ಟ್ರಸ್ಟ್ ಕಾರ್ಯದರ್ಶಿ ಶ್ರೀಧರ ರಾವ್ ಆರ್.ಎಂ. ವಂದಿಸಿದರು.