HEALTH TIPS

ಕೆಎಸ್‍ಎಫ್‍ಇ ಅಡಮಾನ ಹಗರಣ: ಮತ್ತಿಬ್ಬರ ಬಂಧನ

               ಮಲಪ್ಪುರಂ: ವಲಾಂಚೇರಿಯ ಕೆಎಸ್‍ಎಫ್‍ಇ ಹಗರಣ ಪ್ರಕರಣದಲ್ಲಿ ಮತ್ತಿಬ್ಬರನ್ನು ಬಂಧಿಸಲಾಗಿದೆ. ಪಾಲಕ್ಕಾಡ್ ಮೂಲದ ಮುಹಮ್ಮದ್ ಶರೀಫ್ ಮತ್ತು ಮುಹಮ್ಮದ್ ಅಶ್ರಫ್ ಬಂಧಿತ ಆರೋಪಿಗಳು.

                ಆರೋಪಿಗಳನ್ನು ವಳಂಚೇರಿ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಇದುವರೆಗೆ ಮೂವರನ್ನು ಬಂಧಿಸಲಾಗಿದೆ. 

              ಕಳೆದ ವರ್ಷ ಅಕ್ಟೋಬರ್ 28 ರಿಂದ ಜನವರಿ 18 ರ ನಡುವೆ ಈ ಘಟನೆ ನಡೆದಿತ್ತು. 221. 63 ಪವನ್ ನಕಲಿ ಚಿನ್ನವನ್ನು ಒತ್ತೆ ಇಟ್ಟಿದ್ದರು. ನಾಲ್ವರ ಗುಂಪು ಹಲವು ಬಾರಿ ಕೆಎಸ್‍ಎಫ್‍ಇಯಲ್ಲಿ ಮೂರು ಆಸ್ತಿಗಳನ್ನು ಗಿರವಿ ಇಟ್ಟಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಪೆÇಲೀಸರು ಬಿಡುಗಡೆ ಮಾಡಿಲ್ಲ. 

            ಕೆಎಸ್‍ಎಫ್‍ಇಯಲ್ಲಿ ನಡೆದಿರುವ ಅತಿ ದೊಡ್ಡ ವಂಚನೆ ಇದಾಗಿದ್ದು, 79 ಖಾತೆಗಳಿಗೆ ವಂಚಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಗುತ್ತಿಗೆ ನೌಕರನನ್ನು ಪೆÇಲೀಸರು ಈ ಹಿಂದೆ ಬಂಧಿಸಿದ್ದರು.

             10 ಖಾತೆಗಳ ಮೂಲಕ ವಂಚನೆ ನಡೆದಿದೆ ಎಂಬುದು ಶಾಖಾ ವ್ಯವಸ್ಥಾಪಕರು ನೀಡಿದ ಮೊದಲ ದೂರು. ಆದರೆ, ನಂತರ ನಡೆಸಿದ ತನಿಖೆಯಲ್ಲಿ ಪ್ರಕರಣದ ವ್ಯಾಪ್ತಿ ದೊಡ್ಡದು ಎಂಬುದು ತನಿಖಾ ತಂಡಕ್ಕೆ ಸ್ಪಷ್ಟವಾಯಿತು. ಆರೋಪಿಗೆ ಕೆಎಸ್‍ಎಫ್‍ಇ ನೌಕರರ ನೆರವು ಸಿಕ್ಕಿರುವುದು ಪೋಲೀಸರು ಪತ್ತೆ ಹಚ್ಚಿದ್ದಾರೆ. ನೌಕರರ ಕೈವಾಡ ಇರುವ ಶಂಕೆ ಇರುವುದರಿಂದ ತನಿಖಾ ತಂಡ ಅವರನ್ನು ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries