HEALTH TIPS

ಸಿರಿಬಾಗಿಲು ಪ್ರತಿಷ್ಠಾನದಲ್ಲಿ 'ರಾಮಧ್ಯಾನ -ಭಜನೆ- ಪ್ರವಚನ' ಸಂಪನ್ನ

                 ಮಧೂರು: ಸಾಂಸ್ಕøತಿಕ ಸಾಹಿತ್ಯ ಕ್ಷೇತ್ರದಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ರಾಮಧ್ಯಾನ- ಭಜನೆ- ಪ್ರವಚನ ಸಂಪನ್ನಗೊಂಡಿತು.

               ಊರ ಪರ ಊರ 12 ಭಜನಾ ತಂಡಗಳಿಂದ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ರಾಮಾಯಣ ಮಾಸಾಚರಣೆಯ ಪ್ರಯುಕ್ತ ವಿಶೇಷ ಭಜನೆ ನಡೆಯಿತು. ಕಾರ್ಯಕ್ರಮದ ಅಮಗವಾಗಿ ದಾಮೋದರ ಶರ್ಮ ಬಾರ್ಕೂರು ಅವರಿಂದ ಭಗವಾನ್ ಶ್ರೀ ರಾಮನ ಆದರ್ಶಗಳ ಕುರಿತಾದ ಪ್ರವಚನ ನಡೆಯಿತು. ಶ್ರೀರಾಮಚಂದ್ರನ ಪಿತೃವಾಕ್ಯ ಪರಿಪಾಲನೆ, ಭರತನ ಭಾತೃಪ್ರೇಮ ,ಸೀತೆಯ ಪಾತಿವೃತ್ಯ ಲಕ್ಷ್ಮಣನ ಸಹೋದರ್ಯದ ಪ್ರೀತಿ ಇತ್ಯಾದಿ ವಿಚಾರಗಳು ಮನಮುಟ್ಟುವಂತೆ ವಿವರಿಸಿದ ಅವರು, ಶ್ರೀ ರಾಮನ ಆದರ್ಶವನ್ನು ಜೀವನದಲ್ಲಿ ಪಾಲಿಸಿದಲ್ಲಿ ಪ್ರತೀ ಕುಟುಂಬಗಳು ಸುಖ ನೆಮ್ಮದಿಯಿಂದ ಬಾಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದರು.  

             ಉದ್ಯಮಿ ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಧಾರ್ಮಿಕತೆ ಸಾಂಸ್ಕೃತಿಕತೆ ಎಲ್ಲವೂ ಜೊತೆಗೂಡಿನಲ್ಲಿ ಒಂದು ಸಾನಿಧ್ಯ ವೃದ್ಧಿಯಾಗಿಸಲು ಸಾಧ್ಯ. ಅದಕ್ಕೆ ಸಿರಿಬಾಗಿಲು ಪ್ರತಿಷ್ಠಾನ ನಿದರ್ಶನವಾಗಿದೆ. ಪ್ರತಿಷ್ಠಾನದ ಚಟುವಟಿಕೆ ಗಡಿನಾಡು ಕಾಸರಗೋಡಿನಲ್ಲಿ ಆದರ್ಶಪ್ರಾಯವಾಗಿದೆ ಎಂದು ತಿಳಿಸಿದರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ರಮಕೃಷ್ಣ ಮಯ್ಯ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries