HEALTH TIPS

ನಾಳೆ ಮೀಯಪದವಲ್ಲಿ ಡಾ.ನಾ.ಮೊಗಸಾಲೆಯವರಿಗೆ ಪೌರಾಭಿನಂದನೆ

            ಮಂಜೇಶ್ವರ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು, ಶಂಪಾ ಪ್ರತಿಷ್ಠಾನ ಬೆಂಗಳೂರು, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ, ವಿಕಾಸ ಮೀಯಪದವು ಇವುಗಳ ಸಂಯುಕ್ತ ಆಶ್ರಯದಲ್ಲಿ ನಾಳೆ(ಆ.10) ಬೆಳಿಗ್ಗೆ 10 ರಿಂದ ಸಂಜೆ 5 ವರೆಗೆ ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲಾ ನಾರಾಯಣೀಯಂ ಸಭಾ ಭವನದಲ್ಲಿ ಡಾ.ನಾ.ಮೊಗಸಾಲೆ ಅವರಿಗೆ ಪೌರಾಭಿನಂದನೆ ಹಾಗೂ ಸಾಹಿತ್ಯ ಸಮೀಕ್ಷೆ ಸಮಾರಂಭ ಏರ್ಪಡಿಸಲಾಗಿದೆ.

             ಸಮಾರಂಭವನ್ನು ಕಸಾಪ ಕರ್ನಾಟಕ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಉದ್ಘಾಟಿಸುವರು.ಸಾಹಿತಿ, ಅರ್ಥಧಾರಿ ಡಾ.ರಮಾನಂದ ಬನಾರಿ ಅಧ್ಯಕ್ಷತೆ ವಹಿಸುವರು.ಕಸಾಪ ದ.ಕ.ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಡಾ.ಮುರಳೀಮೋಹನ್ ಚೂಂತಾರು, ತೆಕ್ಕೇಕೆರೆ ಶಂಕರನಾರಾಯಣ ಭಟ್, ನ್ಯಾಯವಾದಿ ಕೆ.ಮುರಳೀಧರ ಬಳ್ಳುಕ್ಕುರಾಯ ಮುಖ್ಯ ಅತಿಥಿಗಳಾಗಿರುವರು.ಡಾ.ನಾ.ಮೊಗಸಾಲೆ ಉಪಸ್ಥಿತರಿರುವರು. 

          ಉದ್ಘಾಟನಾ ಸಮಾರಂಭದ ಬಳಿಕ ನಡೆಯುವ ಸಾಹಿತ್ಯ ಮೊದಲ ಗೋಷ್ಠಿಯಲ್ಲಿ ಮೊಗಸಾಲೆಯವರ ಕಾವ್ಯದ ಬಗ್ಗೆ ರಮೇಶ್ ಭಟ್ ಬೆಳಗೋಡು,ಕಾದಂಬರಿಗಳ ಬಗ್ಗೆ ಡಾ.ಬಿ.ಜನಾರ್ದನ ಭಟ್, ಸಣ್ಣ ಕತೆಗಳ ಬಗ್ಗೆ ಡಾ.ಸುಭಾಷ್ ಪಟ್ಟಾಜೆ ಮಾತನಾಡುವರು. ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಧ್ಯಕ್ಷತೆ ವಹಿಸುವರು.ಅ

              ಅಪರಾಹ್ನ 2 ರಿಂದ ನಡೆಯುವ ಎರಡನೇ ಗೋಷ್ಠಿಯಲ್ಲಿ ಡಾ.ಯು.ಮಹೇಶ್ವರಿ ಅಧ್ಯಕ್ಷತೆ ವಹಿಸುವರು. ನಾ ಮೆಚ್ಚಿದ ಕಾದಂಬರಿಗಳ ಬಗ್ಗೆ ಸ್ವಾತಿ ಕೆ.ಪೊನ್ನೆತ್ತೋಡು, ಅನನ್ಯ ಬೇಕಲ, ಪಲ್ಲವಿ ಕೆ, ಮಲ್ಲ ಮಾತನಾಡುವರು.

                  ಬಳಿಕ ನಡೆಯುವ ಡಾ.ಮೊಗಸಾಲೆಯವರೊಂದಿಗೆ ಲೋಕಾಭಿರಾಮ ಗೋಷ್ಠಿಯಲ್ಲಿ ಪ್ರೊ.ಪಿ.ಎನ್.ಮೂಡಿತ್ತಾಯ, ಡಾ.ಪ್ರಮೀಳಾ ಮಾಧವ್, ಡಾ.ಧನಂಜಯ ಕುಂಬಳೆ ಭಾಗವಹಿಸುವರು. ಡಾ.ಎಸ್.ಎಲ್.ಮಂಜುನಾಥ್ ಅಧ್ಯಕ್ಷತೆ ವಹಿಸುವರು.

             ಸಂಜೆ 3.30 ರಿಂದ ನಡೆಯಲಿರುವ ಸಮಾರೋಪದಲ್ಲಿ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು. ಡಾ.ವರದರಾಜ ಚಂದ್ರಗಿರಿ ಅಭಿನಂದನಾ ಭಾಷಣ ಮಾಡುವರು. ಡಾ.ಹರಿಕೃಷ್ಣ ಭರಣ್ಯ ಹಾಗೂ ವಿಠಲ ಗಟ್ಟಿ ಬೇಲಾಡಿ ಮುಖ್ಯ ಅತಿಥಿಗಳಾಗಿರುವರು. ಡಾ.ಮೊಗಸಾಲೆಯವರಿಗೆ ಈ ಸಂದರ್ಭ ಪೌರ ಸನ್ಮಾನ ನಡೆಯಲಿದ್ದು, ಡಾ.ರಾಧಾಕೃಷ್ಣ ಬೆಳ್ಳೂರು ಸನ್ಮಾನಪತ್ರ ವಾಚಿಸುವರು. ಎಂ.ಉಮೇಶ್ ಸಾಲ್ಯಾನ್,ವಾಮನ ರಾವ್ ಬೇಕಲ, ರವಿ ನಾಯ್ಕಾಪು, ಶ್ರೀನಿವಾಸ ಪಿ.ಬಿ., ಶಿವರಾಮ ಕಾಸರಗೋಡು, ಜಯಲಕ್ಷ್ಮೀ ಕಾರಂತ, ಶ್ರೀಧರ ರಾವ್ ಆರ್.ಎಂ., ವಿಶಾಲಾಕ್ಷ ಪುತ್ರಕಳ, ದಿವ್ಯಾ ಗಟ್ಟಿ ಪರಕ್ಕಿಲ ಉಪಸ್ಥಿತರಿರುವರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries