ಕುಂಬಳೆ: ಪತ್ರಕರ್ತ, ಲೇಖಕ ಎಂ.ನಾ. ಚಂಬಲ್ತಿಮಾರ್ ಅವರಿಗೆ ಗೌರವ ಸನ್ಮಾನ ಆ.4ರಂದು ಚಿಕ್ಕಮಗಳೂರಲ್ಲಿ ನಡೆಯಲಿದೆ. ಚಿಕ್ಕಮಗಳೂರಿನ "ಯಕ್ಷಸಿರಿ ನಾಟ್ಯವೃಂದ", ಕಲ್ಕಟ್ಟೆ ಪುಸ್ತಕಮನೆ, ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ ಮತ್ತು ಹರಿ ಓಂ ಬಿಲ್ಡರ್ಸ್ ಸಂಯುಕ್ತವಾಗಿ ಆಯೋಜಿಸಿದ ಯಕ್ಷಗಾನೀಯ ಸಮಾರಂಭದಲ್ಲಿ ಅಭಿನಂದನೆ ನಡೆಯಲಿದೆ.
ಯಕ್ಷಗಾನಾಚಾರ್ಯ ಪಾರ್ತಿಸುಬ್ಬ ಅವರ ತವರು ನೆಲ ಕುಂಬ್ಳೆಯಿAದ ಯಕ್ಷಗಾನ ಕಲಾಸಂಸ್ಕೃತಿಗೆ ಸೃಜನಶೀಲ, ವೃತ್ತಿಪರತೆಯ ಮಾಧ್ಯಮ "ಕಣಿಪುರ" ಮಾಸಪತ್ರಿಕೆಯನ್ನು ನೀಡಿದ್ದಲ್ಲದೇ, ಕಲೆಗೆ ನೀಡಿದ ಸಮಗ್ರ ಕೊಡುಗೆ ಮನ್ನಿಸಿ ಈ ಗೌರವ ನೀಡಲಾಗುತ್ತಿದೆ.
ಅಂದು ಸಂಜೆ 4ಕ್ಕೆ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಸಕ ಎಚ್. ಡಿ. ತಮ್ಮಯ್ಯ ಉದ್ಘಾಟಿಸುವರು. ನಗರದ ವೈದ್ಯ ಡಾ. ಜೆ.ಪಿ ಕೃಷ್ಣೇಗೌಡ ಸನ್ಮಾನ ಗೌರವ ಸಲ್ಲಿಸುವರು. ಕವಿ, ಗಾಯಕ ನಾಗರಾಜ ರಾವ್ ಕಲ್ಕಟ್ಟೆ ಉಪಸ್ಥಿತರಿರುವರು. ಈ ಸಂದರ್ಭ ಯಕ್ಷಸಿರಿ ನಾಟ್ಯವೃಂದದ ನೇತೃತ್ವದಲ್ಲಿ, ಚಿಕ್ಕಮಗಳೂರು ನಗರದ ವನಿತೆಯರು ಭಾಗವಹಿಸುವ "ಶ್ರೀದೇವಿ ಮಹಾತ್ಮೆ" ಎಂಬ ತೆಂಕಣ ಯಕ್ಷಗಾನ ಪ್ರದರ್ಶನ ನಡೆಯುವುದು.