HEALTH TIPS

ನಾಳೆ ಸಿರಿಬಾಗಿಲು ಸಾಂಸ್ಕøತಿಕ ಭವನದಲ್ಲಿ ರಾಮಧ್ಯಾನ ಭಜನೆ, ಪ್ರವಚನ

               ಕಾಸರಗೋಡು: ಸಾಂಸ್ಕೃತಿಕ ಕಾರ್ಯಕ್ರಮಗಳ  ಮೂಲಕ ಹಲವಾರು ಕಲಾವಿದರಿಗೆ ಅವಕಾಶ ಕಲ್ಪಿಸಿ ಯಶಸ್ವಿಯಾಗಿರುವ ಗಡಿನಾಡು ಕಾಸರಗೋಡಿನ ಸಂಸ್ಥೆ  ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಆ.10ರಂದು  ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿಶೇಷ ಭಜನಾ ಕಾರ್ಯಕ್ರಮ ಹಾಗೂ ಪ್ರವಚನ ನಡೆಯಲಿದೆ. 

             ರಾಮಾಯಣ ಮಹಾಸಾಚರಣೆಯ ಅಂಗವಾಗಿ ನಡೆಯುವ ಒಂದು ದಿನದ ವಿಶೇಷ ಕಾರ್ಯಕ್ರಮದಲ್ಲಿ 12 ತಂಡಗಳ ರಾಮಧ್ಯಾನ ಭಜನೆ ನಡೆಯಲಿದೆ. ಅಂದು ಬೆಳಗ್ಗೆ ಕತ್ತಾರ್ ನಲ್ಲಿ ಉದ್ಯೋಗಿಯಾಗಿರುವ  ಕೃಷ್ಣನ್ ಅವರು ದೀಪ ಪ್ರಜ್ವಲನೆ  ಮೂಲಕ ಉದ್ಘಾಟಿಸುವರು. ಸಂಜೆ 6.30ಕ್ಕೆ ವಿಶೇಷ ಪ್ರವಚನ ಕಾರ್ಯಕ್ರಮ ನಡೆಯಲಿದೆ.  ಪುರೋಹಿತ, ವಿದ್ವಾಂಸರು ಆಗಿರುವ ಉಡುಪಿ ಜಿಲ್ಲೆಯ ಬಾರ್ಕೂರಿನ ದಾಮೋದರ್ ಶರ್ಮ ಬಾರ್ಕೂರು ಅವರು ರಾಮ ನಾಮದ ಮಹತ್ವದ ಕುರಿತಾದ ಪ್ರವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಾಗಿ   ಉದ್ಯಮಿ, ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಭಾಗವಹಿಸುವರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries