HEALTH TIPS

ಮಾನವ ಕಳ್ಳಸಾಗಣೆ ಪ್ರಕರಣ; ಹೆಚ್ಚಿನ ಜನರ ವಿಚಾರಣೆ; ಆರೋಪ ಪಟ್ಟಿ ಸಲ್ಲಿಸಿದ ಎನ್‍ಐಎ

            ತಿರುವನಂತಪುರಂ: ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಐಎ ಚಾರ್ಜ್ ಶೀಟ್ ಸಲ್ಲಿಸಿದೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳಾಗಿದ್ದಾರೆ.

             ಪ್ರಕರಣವನ್ನು ಕೈಗೆತ್ತಿಕೊಂಡ 30 ದಿನಗಳಲ್ಲಿ ಎನ್‍ಐಎ ಚಾರ್ಜ್‍ಶೀಟ್ ಸಲ್ಲಿಸಿದೆ. ಮೊದಲ ಆರೋಪಿ ಮಧುವನ್ನು ವಿದೇಶದಿಂದ ಸ್ವದೇಶಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿರುವಾಗಲೇ ಎನ್‍ಐಎ ಈ ಆರೋಪ ಪಟ್ಟಿ ಸಲ್ಲಿಸಿತ್ತು.

               ಖಾಸಗಿ ಆಸ್ಪತ್ರೆಗಳ ಮೇಲೆ ಎನ್‍ಐಎ ತನಿಖೆ ನಡೆಸುತ್ತಿದೆ. ಹಣ ಪಡೆದವರ ಮಾಹಿತಿ ರವಾನಿಸಿರುವ ಶಂಕೆಯೂ ಇದೆ. ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ಭಾಗಿಯಾಗಿದ್ದು, ವಿಸ್ತೃತ ತನಿಖೆ ನಡೆಸಲಾಗುತ್ತಿದೆ ಎಂದು ಎನ್‍ಐಎ ತಿಳಿಸಿದೆ.

          ಈ ಪ್ರಕರಣದಲ್ಲಿ ತ್ರಿಶೂರ್ ಮೂಲದ ಸಬಿತ್ ನಾಸರ್ ಬಂಧಿತ ಮೊದಲಿಗ. ಮುಂಬೈನಲ್ಲಿ ಬಂಧಿತನಾದ ಮಾನವ ಕಳ್ಳಸಾಗಣೆದಾರನಿಂದ ತನಿಖಾ ಸಂಸ್ಥೆಗಳು ಸಬಿತ್ ಬಗ್ಗೆ ಮಾಹಿತಿ ಪಡೆದಿವೆ.

          ಕೊಚ್ಚಿ, ಕುವೈತ್ ಮತ್ತು ಇರಾನ್ ಮಾರ್ಗದಲ್ಲಿ ಸಾಬಿತ್ ಕೆಲಸ ಮಾಡುತ್ತಿದ್ದ. ತಮ್ಮ ಮೂತ್ರಪಿಂಡಗಳನ್ನು ದಾನ ಮಾಡಲು ಸಿದ್ಧರಿರುವ ಜನರನ್ನು ಹುಡುಕುವುದು ಮತ್ತು ಅವರನ್ನು ಇರಾನ್‍ಗೆ ಕರೆತರುವುದು ಸಬಿತ್‍ನ ಕೆಲಸವಾಗಿತ್ತು. ನಕಲಿ ದಾಖಲೆಗಳನ್ನು ಸಿದ್ಧಪಡಿಸಿ ಬಡವರನ್ನು ದಾರಿ ತಪ್ಪಿಸುವ ಮೂಲಕ ಜನರನ್ನು ಇರಾನ್‍ಗೆ ಕರೆದೊಯ್ದಿದ್ದನ್ನು ಎನ್‍ಐಎ ಪತ್ತೆ ಮಾಡಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries