HEALTH TIPS

ವೇತನದಿಂದ ನೆರವು ಯೋಜನೆ: ಉದ್ಯೋಗಿಗಳ ಭವಿಷ್ಯ ನಿಧಿ ಸಾಲಗಳನ್ನು ನಿಲ್ಲಿಸಬಾರದು: ಎನ್‍ಜಿಒ ಸಂಘ

                   ತಿರುವನಂತಪುರ: ರಾಜ್ಯ ಸರ್ಕಾರ ಘೋಷಿಸಿರುವ ಸ್ಯಾಲರಿ ಚಾಲೆಂಜ್ ನಲ್ಲಿ ಐದು ದಿನಗಳ ವೇತನ ಪಾವತಿ ಮಾಡದ ನೌಕರರ ಭವಿಷ್ಯ ನಿಧಿ ಸಾಲದ ಅರ್ಜಿಯನ್ನು ‘ಸ್ಪಾರ್ಕ್’ ಎಂಬ ವೇತನ ವಿತರಣಾ ಸಾಫ್ಟ್ ವೇರ್ ನಲ್ಲಿ ತಿರಸ್ಕರಿಸಿರುವುದು ತೀವ್ರ ಆಕ್ಷೇಪಾರ್ಹವಾಗಿದೆ.

       ನೌಕರರು. ವೈಯಕ್ತಿಕ ಉದ್ದೇಶಗಳಿಗಾಗಿ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಿದ ಹಣವನ್ನು ಎರವಲು ಪಡೆಯುವುದನ್ನು ತಡೆಯುವ ಸರ್ಕಾರದ ಕ್ರಮವು ನಾಗರಿಕ ಹಕ್ಕುಗಳ ಉಲ್ಲಂಘನೆಯಾಗಿದೆ  ಈ ಬಗ್ಗೆ ಎಂ.ಜಿ.ಓ. ಸಂಘ ಆರೋಪಿಸಿದೆ. ಸ್ಯಾಲರಿ ಚಾಲೆಂಜ್ ನಲ್ಲಿ ಭಾಗವಹಿಸುವವರು ಮಾತ್ರ ಸಮ್ಮತಿ ನೀಡಬೇಕು ಎಂದು ಎನ್. ಜಿ. ಓ. ಸಂಘ ಸೂಚಿಸಿದೆ.

              ಆಸಕ್ತರು ಮಾತ್ರ ಒಪ್ಪಿಗೆ ನೀಡಬೇಕು ಎಂಬ ಸರ್ಕಾರದ ಆದೇಶಕ್ಕೆ ವ್ಯತಿರಿಕ್ತವಾಗಿ ಕಚೇರಿ ಮುಖ್ಯಸ್ಥರು ಎಲ್ಲರೂ ಒಪ್ಪಿಗೆ ನೀಡಬೇಕು ಎಂದು ಸುತ್ತೋಲೆ ಹೊರಡಿಸಿ ನೌಕರರನ್ನು ಸ್ಯಾಲರಿ ಚಾಲೆಂಜ್ ನಲ್ಲಿ ಭಾಗವಹಿಸುವಂತೆ ಒತ್ತಾಯಿಸಿರುವರು. ಆದರೆ ಐ.ಎಂ. ಜಿ. ನಿರ್ದೇಶಕರು ಹೊರಡಿಸಿರುವ ಕಡ್ಡಾಯ ಸುತ್ತೋಲೆ ವಿರುದ್ಧ ಐ. ಎಂ. ಜಿ. ಕಚೇರಿಯಲ್ಲಿ ಎನ್. ಜಿ. ಓ. ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸುತ್ತೋಲೆ ವಾಪಸ್ ಪಡೆದು ಹೊಸ ಸುತ್ತೋಲೆ ಹೊರಡಿಸಲಾಗಿದೆ. ಇಂತಹ ಕಾನೂನು ಬಾಹಿರ ಕ್ರಮಗಳ ಮೂಲಕ ನೌಕರರ ಒಪ್ಪಿಗೆಯಿಲ್ಲದೆ ಬೆದರಿಸಿ ಸಂಬಳ ವಶಪಡಿಸಿಕೊಳ್ಳುವ ಎಡ ಸರ್ಕಾರದ ಪ್ರಯತ್ನಕ್ಕೆ ಕೇರಳ ಎನ್. ಜಿ. ಓ. ಸಂಘದ ರಾಜ್ಯಾಧ್ಯಕ್ಷ ಟಿ. ದೇವಾನಂದನ್, ಪ್ರಧಾನ ಕಾರ್ಯದರ್ಶಿ ಎಸ್. ರಾಜೇಶ್ ಆಕ್ಷೇಪ ವ್ಯಕ್ತಪಡಿಸಿರುವರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries