ಮೆಪ್ಪಾಡಿ: ವಯನಾಡಿನ ಭೀಕರತೆಯ ಸಾಕ್ಷಿಗಳು ನಿಧಾನವಾಗಿ ಹೊರಬರುತ್ತಿದ್ದು, ಮಾನವ ಜೀವಿತದ ನಿಷ್ಕೃಷ್ಟತೆಯನ್ನು ಕ್ಷಣ ನಮ್ಮ ಮುಂದಿರಿಸಿ ಕಳವಳಗೊಳಿಸುತ್ತದೆ. ಇಲ್ಲಿಯ ಒಬ್ಬಾಕೆ ಶೃತಿ ಅನಾಥಳಾಗಿ ದಿಕ್ಕೆಟ್ಟಿರುವುದು ಕರುಳು ಹಿಂಡುತ್ತಿದೆ. ತನ್ನ ತಂದೆ, ತಾಯಿ ಮತ್ತು ಅತ್ತಿಗೆಯೊಂದಿಗೆ ಮಲಗಿದ್ದವಳು, ಪ್ರಕೃತಿ ತಾಂಡವದ ಬಳಿಕ ಒಬ್ಬಂಟಿಯಾಗಿ ಭವಿಷ್ಯದ ಕರಾಳತೆಯ ಮುಖಹೊತ್ತು ಕಣ್ಣೀರ ಕಡಲಲ್ಲಿ ಮುಳುಗಿದ್ದಾರೆ.
ಮುಂದಿನ ಡಿಸೆಂಬರ್ನಲ್ಲಿ ಶ್ರುತಿಯ ವಿವಾಹ ನಿಶ್ಚಯವಾಗಿತ್ತು. ಅದಕ್ಕಾಗಿ ನಾಲ್ಕೂವರೆ ಲಕ್ಷ ರೂಪಾಯಿ ಹಾಗೂ ಹದಿನೈದು ಪವನ್ ಬಂಗಾರ ತಂದಿರಿಸಿದ್ದರು. ಬಂಧುಗಳ ಜೊತೆಗೆ ಅವೂ ಇಂದು ನಷ್ಟಗೊಂಡಿದೆ. ಮನೆಯೂ ಇಲ್ಲ.
ಕಿರಿಯ ಸಹೋದರಿ ಶ್ರೇಯಾಳ ಚಿತೆಗೆ ಬೆಂಕಿ ಹಚ್ಚುವ ದುರ್ದೈವ ನೆನೆದು ಶ್ರುತಿಯ ಕಣ್ಣುಗಳು ಸಾಗರದೋಪಾದಿಯಲ್ಲಿ ಹರಿದು ಕುಸಿದುಬಿದ್ದದ್ದು ಸ್ಥಳದಲ್ಲಿದ್ದ ಸೇನಾ ಪ್ರಮುಖರನ್ನೂ ಕಳವಳಗೊಳಿಸಿತು. ಶೃತಿಯ ತಂದೆ ಶಿವನ್, ತಾಯಿ ಸಬಿತಾ ಮತ್ತು ಅತ್ತಿಗೆ ಶ್ರೇಯಾ ಅವರನ್ನು ದುರಂತ ಬಲಿತೆಗೆದುಕೊಂಡಿದೆ. ಶೃತಿ ಘಟನೆಯ ದಿನ ಸಂಬAಧಿಕರ ಮನೆಯಲ್ಲಿದ್ದ ಕಾರಣ ಅಪಾಯದಿಂದ ಪಾರಾಗಿ ಏಕಾಂಗಿಯಾಗಿ ಉಳಿದಿರುವರು. ಘಟನೆಯಲ್ಲಿ ಶೃತಿಯ ಸಹೋದರಿ ಶ್ರೇಯಾಳ ಮೃತದೇಹ ಮಾತ್ರ ಪತ್ತೆಯಾಗಿದೆ. ಕಲ್ಪಟ್ಟಾ ಸರ್ಕಾರಿ ಕಾಲೇಜಲ್ಲಿ ಶ್ರೇಯಾ ಪದವಿ ವಿದ್ಯಾರ್ಥಿನಿಯಾಗಿದ್ದಳು.