HEALTH TIPS

ಕೋಳ್ಯೂರು ಕ್ಷೇತ್ರದಿಂದ ಕಳವು: ನಾಳೆ ಮಜೀರ್ ಪಳ್ಳದಲ್ಲಿ ಖಂಡನಾ ಸಭೆ

                 ಮಂಜೇಶ್ವರ: ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನಕ್ಕೆ ನುಗ್ಗಿ ಚಿನ್ನ, ಬೆಳ್ಳಿ ಆಭರಣ ಕಳವುಗೈದಿರುವುದಲ್ಲದೆ, ಕ್ಷೇತ್ರದ ಪಾವಿತ್ರö್ಯತೆಗೆ ಧಕ್ಕೆ ತಂದೊಡ್ಡಿರುವ ಸಮಾಜಘಾತುಕರನ್ನು ಬಂಧಿಸದಿರುವ ಪೊಲೀಸರ ಕ್ರಮ ಖಂಡಿಸಿ ಭಕ್ತಾದಿಗಳಿಂದ ಖಂಡನಾ ಸಭೆ ಆ. 4ರಂದು ಸಂಜೆ 4ಕ್ಕೆ ಸುಂಕದಕಟ್ಟೆ ಮಜೀರ್‌ಪಳ್ಳದಲ್ಲಿ ಜರಗಲಿದೆ.

              ದೇವಸ್ಥಾನ ಹಾಗೂ ಆಸುಪಸಿನ ಮನೆಗಳಿಂದ ನಿರಂತರ ಕಳವು ಕೃತ್ಯಗಳು ನಡೆಯುತ್ತಾ ಬರುತ್ತಿದ್ದರೂ, ಕಳವುಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಪತ್ತೆನಡೆಸದಿರುವುದು  ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿರುವ ಪೊಲೀಸರ ನಡೆ ಖಂಡಿಸಿ ಸಭೆ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries