ಕುಂಬಳೆ: ಪುತ್ತಿಗೆ ಪಂಚಾಯಿತಿ ಧರ್ಮತ್ತಡ್ಕದಲ್ಲಿ ನೂತನವಾಗಿ ಆರಂಭಿಸಲಾಗಿರುವ ಕೇರಳ ಸರ್ಕಾರದ ಯೋಜನೆ ಅಕ್ಷಯ ಕೇಂದ್ರದ ಉದ್ಘಾಟನೆ ಆ. 8ರಂದು ಬೆಳಗ್ಗೆ 10ಕ್ಕೆ ನಡೆಯಲಿರುವುದು.
ಪುತ್ತಿಗೆ ಗ್ರಾಪಂ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ ನೂತನ ಅಕ್ಷಯ ಕೇಂದ್ರ ಉದ್ಘಾಟಿಸುವರು. ಗ್ರಾಪಂ ಸದಸ್ಯೆ ಶಾಂತಿ ವೈ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಅಕ್ಷಯ ಡಿಸಿಎಂ ಕಪಿಲ್ದೇವ್, ಪುತ್ತಿಗೆ ಗ್ರಾಪಂ ಉಪಾಧ್ಯಕ್ಷೆ ಜಯಂತಿ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯೆ ಚಂದ್ರಾವತೀ ಮುಖ್ಯ ಅತಿತಿಯಾಗಿ ಭಾಗವಹಿಸುವರು.