HEALTH TIPS

ಮೊಗ್ರಾಲ್ ಪುತ್ತೂರು ಶಾಲಾ ವಿದ್ಯಾರ್ಥಿಗಳಿಂದ ಬಯಲು ಕಲಿಕೆ-ಕೃಷಿ ದಿನಾಚರಣೆ

            ಕುಂಬಳೆ:  ಮೊಗ್ರಾಲ್ ಪುತ್ತೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪರಿಸರ ಸಂಘ, ಎನ್.ಜಿ.ಸಿ ಜೀವವೈವಿಧ್ಯ  ಕ್ಲಬ್‍ಗಳು ಕೃಷಿ ದಿನಾಚರಣೆಯನ್ನು ದೇಶಿ ತರಕಾರಿ ಬೀಜಗಳ ವಿತರಣೆ, ಕೃಷಿ ಜ್ಞಾನ ತರಗತಿ, ರೈತರಿಗೆ ಸನ್ಮಾನ, ಹಲಸಿನ ನಾಟಿ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಯೋಜಿಸಿದ್ದವು.

             ಬಲಿತ ಭತ್ತದ ಗದ್ದೆಗಳ ಹುಡುಕಾಟದ ಕ್ಷೇತ್ರ ಪ್ರವಾಸವು ಮಕ್ಕಳಿಗೆ ಹೊಸ ಜ್ಞಾನ ಮತ್ತು ಅನುಭವಗಳ ಆಗರವಾಗಿತ್ತು. ಭತ್ತದ ಸಸಿಗಳಿಂದ ತುಂಬಿರುವ ಗದ್ದೆಯಲ್ಲಿ ರೈತರು, ಕೃಷಿ ಕಾರ್ಮಿಕರೊಂದಿಗೆ ಮಕ್ಕಳು ನೇಜಿ ಕೀಳುತ್ತಾ, ನಾಟಿ ಮಾಡಿ ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತಾ ಕೃಷಿಯ ಕುರಿತಾದ ನೈಜ ಅನುಭವವನ್ನು ಪಡೆದುಕೊಂಡರು.ಮೊಗ್ರಾಲ್ ಪುತ್ತೂರು ಕೃಷಿ ಅಧಿಕಾರಿ ಅಕ್ಷತಾ ವಯೋಲರಿ ಕಲಿಕಾ ತರಗತಿಯ ಉದ್ಘಾಟನೆ ನಿರ್ವಹಿಸಿದರು. 

              ಶಾಲೆಯ ಬಳಿಯಿರುವ ತರಕಾರಿ ತೋಟಕ್ಕೆ ಭೇಟಿ ನೀಡುವ ಮೂಲಕ ಆರಂಭವಾದ ಬಯಲನ್ನು ತಿಳಿಯುವ ಯಾತ್ರೆ ಬಳ್ಳೂರು ಮೈದಾನದಲ್ಲಿ ಮುಕ್ತಾಯವಾಯಿತು.

            ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಸ್ಥೆ ಬೀನಾ ಸಿ.ಟಿ., ಪಿ.ಟಿ.ಎ ಉಪಾಧ್ಯಕ್ಷ ಖಾದರ್ ಕಡವತ್, ಮಾಹಿನ್ ಕುನ್ನಿಲ್, ಜನಾರ್ದನನ್ ಟಿ.ವಿ, ಸ್ನೇಹಾ ಭಾಸ್ಕರನ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರೈತರಾದ ಕೃಷ್ಣಪ್ಪ, ಅರುಣ್, ರಘುರಾಮ್ ಹಾಗೂ ಕೃಷಿ ಕಾರ್ಮಿಕರಾದ ಪದ್ಮಾವತಿ, ಕಮಲಾ, ದೇವಕಿ, ಲೀಲಾ, ವೇದಾವತಿ ಅವರನ್ನು ಸನ್ಮಾನಿಸಲಾಯಿತು.

            ಶಿಕ್ಷಕರಾದ ಅಲಿ ಅಕ್ಬರ್, ಅಜ್ಮಲ್ ಮುಬಾರಕ್, ಸಾದಿಕ್, ಮಾಜಿತಾ, ರೇಷ್ಮಾ, ಶಿಲ್ಪಾ, ದರ್ಶನಾ, ಫರ್ಸೀನಾ, ಸೌಮ್ಯ ಅನುಷಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವೈಷ್ಣವಿ, ಶರಣ್, ನವ್ಯಾ, ಯಕ್ಷಿತ್, ಜಸೀಲ್, ಮಿಗ್ದಾದ್, ತನ್ಸೀಹ್, ಅನನ್ಯ ಮೊದಲಾದವರು ಭಾಗವಹಿಸಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries