HEALTH TIPS

ಕಯ್ಯಾರು ಕ್ರಸ್ತರಾಜ ದೇವಾಲಯದಿಂದ ಎರಡು ನೂತನ ಮನೆಗಳ ಹಸ್ತಾಂತರ

                  ಕುಂಬಳೆ: ಕಯ್ಯಾರ್ ಕ್ರಿಸ್ತರಾಜ ದೇವಾಲಯದ ನೂತನ ಕಟ್ಟಡದ ನಿರ್ಮಾಣದಂಗವಾಗಿ ಬಡ ಕುಟುಂಬಗಳಿಗೆ ನಿರ್ಮಿಸಿದ ಎರಡು ನೂತನ ಮನೆಗಳು ಹಾಗೂ ಮೂರನೇ ಮನೆಗೆ  ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಚೇವಾರ್ ಸಮೀಪ ಈ ಮನೆಗಳನ್ನು ನಿರ್ಮಿಸಲಾಗಿತ್ತು. ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೇಳ ಶೋಕಮಾತಾ ಪುಣ್ಯಕ್ಷೇತ್ರದ ಧರ್ಮಗುರು ಹಾಗೂ ಕಾಸರಗೋಡು ವಲಯದ ಪ್ರಧಾನ ಧರ್ಮಗುರು ಫಾ.ಸ್ಟ್ಯಾನಿ ಪಿರೇರಾ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಧರ್ಮಪ್ರಾಂತ್ಯದ ಎಸ್ಟೇಟ್ ಮೆನೇಜರ್ ಫಾ.ಮ್ಯಾಕ್ಷಿಂ ರೊಜಾರಿಯೊ  ಆಶೀರ್ವಚನ ನೀಡಿದರು.

                ಸಮಾರಂಭದಲ್ಲಿ  ಕಯ್ಯಾರ್ ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾ.ವಿಶಾಲ್ ಮೋನಿಸ್, ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಡಿ'ಸೋಜ, ಕಾರ್ಯದರ್ಶಿ ಝೀನಾ ಡಿ'ಸೋಜ, ಸ್ಥಳ ದಾನಿ ಲಿಗೋರಿ ಡಿ'ಸೋಜ ಮತ್ತು ಬ್ರಿಜಿತ್ ಡಿ'ಸೋಜ, ಮರಿಯೆಚೆ ಲೀಜನ್ ಸಂಘಟನೆಯ ಅಧ್ಯಕ್ಷೆ ಭವ್ಯಾ ಮೊಂತೆರೋ, ಸಾಂ.ವಿಶೆಂತ್ ಪಾವ್ಲ್, ಘಟಕದ ಅಧ್ಯಕ್ಷ  ಜೋಸೆಫ್ ಸುವಾರಿಸ್, ಕೆಥೋಲಿಕ್ ಸಭಾ ಘಟಕದ ಅಧ್ಯಕ್ಷೆ ಸುನಿತಾ ಡಿ'ಸೋಜ, ಸಿಸ್ಟರ್ ಜಾಸ್ಮಿನ್ ಲೂವಿಸ್ ಮೊದಲಾದವರು ಉಪಸ್ಥಿತರಿದ್ದರು.  

              ಮೂರನೇ ಮನೆಗೆ ಆಶೀರ್ವಚನ ಕಾರ್ಯವೂ ಈ ಸಂದರ್ಭದಲ್ಲಿ ನಡೆಯಿತು. ಫಾ.ಸ್ಟ್ಯಾನಿ ಪಿರೇರಾ ನೆರವೇರಿಸಿದರು. ಮನೆಗಳ ನಿರ್ಮಾಣಕ್ಕೆ  ಸ್ಥಳ ದಾನ ನೀಡಿದ ಲಿಗೋರಿ-ಬ್ರಿಜಿತ್ ಡಿ'ಸೋಜ  ದಂಪತಿಯನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ಸಿಸ್ಟರ್ ರೀನಾ ಸೆರಾವೊ ಪರಿಚಯ ನೀಡಿದರು. ಮನೆಗೆ ದಾನ ಹಾಗೂ ಸಹಕಾರ, ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು. ಸಂತೋಷ್ ಕ್ರಾಸ್ತಾ ಹಾಗೂ ಪೀಟರ್ ಡಿ'ಸೋಜ ಅವರಿಗೆ ಮನೆ ಹಸ್ತಾಂತರಿಸಲಾಯಿತು.  

        ಎಂಜಿನಿಯರ್ ರಾಧಾಕೃಷ್ಣ ಮುಳಿಯ ಅವರನ್ನು ಸಮ್ಮಾನಿಸಲಾಯಿತು. ಫಾ.ವಿಶಾಲ್ ಮೋನಿಸ್ ಸ್ವಾಗತಿಸಿ, ರೋಶನ್ ಡಿ'ಸೋಜ ವಂದಿಸಿದರು. ಆನ್ಸನ್ ಮತ್ತು ರೀಷಾ ಕಾರ್ಯಕ್ರಮ ನಿರೂಪಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries