ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಎ.ಯು.ಪಿ ಶಾ¯ಯ ಕಿರಿಯ ಪ್ರಾಥಮಿಕ ಮಟ್ಟದ ಬಾಲಸಭೆ ಕಾರ್ಯಕ್ರಮ ದಿ.ಯಂ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಶುಕ್ರವಾರ ಜರಗಿತು. ಮುಖ್ಯಶಿಕ್ಷಕ ಅರವಿಂದಾಕ್ಷ ಭಂಡಾರಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಅಧ್ಯಾಪಕ ರಾಮಚಂದ್ರ.ಕೆ.ಎಂ, ಶಾಲಾ ನೌಕರ ಸಂಘದ ಕಾರ್ಯದರ್ಶಿ ಎಸ್.ಎಸ್.ಪ್ರಸಾದ್, ಶಾಲಾ ಎಸ್ ಆರ್ ಜಿ ಕನ್ವೀನರ್ ಗಳಾದ ಶಿಹಾಬುದ್ದೀನ್ ಹಾಗೂ ಸ್ವಾತಿ.ಟಿ ಶುಭಹಾರೈಸಿದಸರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ರಂಗೇರಿದವು. ಕುಮಾರಿ ಅಭಿಜ್ಞಾ ಸ್ವಾಗತಿಸಿ, ರಿಝಾನ್ ಮೊಹಮ್ಮದ್ ವಂದಿಸಿದರು. ವಿದ್ಯಾರ್ಥಿಗಳು ನಿರೂಪಿಸಿದರು.