ಉಪ್ಪಳ: ಕಯ್ಯಾರು ಪರಂಬಳದಲ್ಲಿ ಶ್ರೀ ಬಾರತ ಮಾತಾ ಸೇವಾ ಟ್ರಸ್ಟ್, ಸಂಘ ಶಕ್ತಿ , ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃಮಂಡಳಿ, ದುರ್ಗಾವಾಹಿನಿ ಉಪಖಂಡ ಸಮಿತಿ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ನಡೆಯಿತು. ಭಜನೆ, ಸ್ಪರ್ಧೆಗಳು ಇತ್ಯಾದಿ ನಡೆದುವು. ಪ್ರಸಿದ್ಧ ಕಲಾವಿದರಿಂದ ಮಾಗಧ ವಧೆ ತಾಳಮದ್ದಲೆ ಜರುಗಿತು. ಹಿಮ್ಮೇಳದಲ್ಲಿ ಕಾವ್ಯಶ್ರೀ ಅಜೇರು, ಶಂಕರ ಕಾಮತ್ ಚೇವಾರು, ಲವಕುಮಾರ್ ಐಲ, ಸತೀಶ್ ಶೆಟ್ಟಿ ಬಾಯಾರು, ಮುಮ್ಮೇಳದಲ್ಲಿ ಜಬ್ಬಾರ್ ಸಮೊ, ಸುಣ್ಣಂಬಳ ವಿಶ್ವೇಶ್ವರ ಭಟ್, ಶೇಣಿ ವೇಣುಗೋಪಾಲ ಭಟ್, ದೇವಕಾನ ಶ್ರೀಕೃಷ್ಣ ಭಟ್ ಭಾಗವಹಿಸಿದರು.