HEALTH TIPS

ಭಾರತೀಯ ವಿಚಾರಕೇಂದ್ರಂ ರಾಜ್ಯ ಅಧ್ಯಯನ ಶಿಬಿರ: ನಾಳೆ ಹಾಗೂ ಭಾನುವಾರ:ಎರ್ನಾಕುಳಂನ ಆಶೀರ್ ಭವನದಲ್ಲಿ

              ತಿರುವನಂತಪುರಂ: ಭಾರತೀಯ ವಿಚಾರಕೇಂದ್ರಂ ರಾಜ್ಯ ಅಧ್ಯಯನ ಶಿಬಿರ - 2024 ನಾಳೆ 0ಮತ್ತು 11 ರಂದು ಎರ್ನಾಕುಳಂನ ಸಂಗೀತ ವೇದಿಕೆಯ ಆಶೀರ್ ಭವನದಲ್ಲಿ ಆಯೋಜಿಸಲಾಗಿದೆ.

               ವಿಚಾರಸತ್ರಂ ಹೆಸರಿನಲ್ಲಿ ಆಯೋಜಿಸಿರುವ ಈ ಕಾರ್ಯಾಗಾರವನ್ನು ವಿವಿಧ ವಿಷಯಗಳ ಕುರಿತು ಗಣ್ಯರು ನಡೆಸಿಕೊಡಲಿದ್ದಾರೆ.

         ಭಾರತೀಯ ವಿಚಾರಕೇಂದ್ರಂ ರಾಜ್ಯ ಅಧ್ಯಯನ ಶಿಬಿರದ ಅಂಗವಾಗಿ  ಆ 10 ರಂದು ಬೆಳಿಗ್ಗೆ 10 ಕ್ಕೆ ಭಾರತೀಯ ವಿಚಾರಕೇಂದ್ರ ಅಧ್ಯಕ್ಷ ಸಂಜನ್ ಅಧ್ಯಕ್ಷತೆ ವಹಿಸುವರು. ಪ್ರೊ. ಪಿ ರವೀಂದ್ರನ್ ಉದ್ಘಾಟಿಸುವರು. ಅಡ್ವ: ಕೆ. ರಾಮಕುಮಾರ್ ಶುಭಾಂಶಸನೆಗೈಯ್ಯುವರು. ಬಳಿಕ ನಡೆಯುವ ವಿಚಾರಗೋಷ್ಠಿಯಲ್ಲಿ ವಿಷಯ: ಜಾಗತಿಕ ಮಾರುಕಟ್ಟೆ ಪಡೆಗಳು ಮತ್ತು ರಾಷ್ಟ್ರೀಯ ಸಂಸ್ಕøತಿಗಳು ವಿಷಯದಲ್ಲಿ ಅಡ್ವ. ಸಜಿ ನಾರಾಯಣನ್, ಲೇಖಕ ಮತ್ತು ಭಾಷಣಕಾರ,  ವಿ. ವಿಶ್ವರಾಜ್, ಮುಖ್ಯ ವ್ಯವಸ್ಥಾಪಕರು, ಸೌತ್ ಇಂಡಿಯನ್ ಬ್ಯಾಂಕ್, ಕೇರಳದಲ್ಲಿ ಯುವಕರ ಭರವಸೆ ಮತ್ತು ಕಾಳಜಿ ವಿಷಯದಲ್ಲಿ ಮಾತನಾಡುವರು.

            ಡಾ. ಬಿ ಅಶೋಕ್, ಐಎಎಸ್, ಕಾರ್ಯದರ್ಶಿ, ಕೃಷಿ ಇಲಾಖೆ., ಪ್ರೊ. ಡಾ. ಅಮೃತ್ ಜಿ. ಕುಮಾರ್, ಕೇಂದ್ರ ಕೇರಳ ವಿಶ್ವವಿದ್ಯಾಲಯ  ಏಕಾತ್ಮ ಮಾನವ ದರ್ಶನ ಮತ್ತು ಆತ್ಮನಿರ್ಭರ ಭಾರತದ ಬಗ್ಗೆ ಮಾತನಾಡುವರು .

          . ಆರ್ ಸಂಜಯನ್, ನಿರ್ದೇಶಕರು, ಭಾರತೀಯ ವಿಚಾರಕೇಂದ್ರ ಉಪಸ್ಥಿತರಿರುವರು.

   11 ರಂದು ಸಂಖ್ಯಾ ಬದಲಾವಣೆ ಮತ್ತು ಅಲ್ಪಸಂಖ್ಯಾತ ರಾಜಕೀಯ ವಿಷಯದ ಬಗ್ಗೆ ಬೆಳಿಗ್ಗೆ 10 ರಿಂದ  ಅನಿಲ್ ಚೌಧರಿ, ಜನಸಂಖ್ಯಾಶಾಸ್ತ್ರಜ್ಞ, ಡಾ. ಜಿ. ಗೋಪಕುಮಾರ್, ಕೇಂದ್ರ ಕೇರಳ ವಿಶ್ವವಿದ್ಯಾಲಯ ಮಾತನಾಡುವರು. 

            ಸಂವಿಧಾನದ 75 ವರ್ಷಗಳು ವಿಷಯದಲ್ಲಿ  ಅಡ್ವ. ಎ.ಜಯಶಂಕರ್, ಹೈಕೋರ್ಟ್ ವಕೀಲರು, ರಾಜಕೀಯ ವೀಕ್ಷಕರು, ಅಡ್ವ. ಡಾ. ಕೆ ಪಿ ಕೈಲಾಸನಾಥ ಪಿಳ್ಳೈ, ಸುಪ್ರೀಂ ಕೋರ್ಟ್ ವಕೀಲರು ಮಾತನಾಡುವರು.

           ಭಾರತೀಯ ಕಾನೂನು ಸಂಹಿತೆ 2023 ರ ಬಗ್ಗೆ ಅಡ್ವ. ಪಿ ಕೃಷ್ಣದಾಸ್, ಕೇರಳ ಹೈಕೋರ್ಟ್,  ಡಾ. ಶಂಕರ್ ಜಿ, ಕೇರಳ ಹೈಕೋರ್ಟ್ ವಿಚಾರ ಮಂಡಿಸುವರು. 

          ಸಮಾರೋಪ ಸಮಾರಂಭ ಸಂಜೆ 4 ರಿಂದ ನಡೆಯಲಿದ್ದು ಪ್ರೊ. ಕೆ ಕೆ ಗೀತಾಕುಮಾರಿ, ಉಪಕುಲಪತಿ, ಶ್ರೀ. ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ, ಕಾಲಡಿ ಉದ್ಘಾಟಿಸುವರು. ನಿವೃತ್ತ ನ್ಯಾಯಮೂರ್ತಿ ಆರ್.ಭಾಸ್ಕರನ್ ಮುಖ್ಯ ಅತಿಥಿಗಳಾಗಿರುವರು.  ಜೆ. ನಂದಕುಮಾರ್, ರಾಷ್ಟ್ರೀಯ ಸಂಯೋಜಕರು, ಪ್ರಜ್ಞಾತ್ರವ ಅವರು ಮಾತನಾಡಲಿರುವರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries