HEALTH TIPS

'ನೌಕರರು ಸಭ್ಯರಾಗಿರಬೇಕು ಮತ್ತು ಕಚೇರಿಯನ್ನು ಸ್ವಚ್ಛವಾಗಿರಿಸಬೇಕು: ಸಚಿವ ಗಣೇಶ್ ಕುಮಾರ್

               ಆಲತ್ತೂರು: ಉಪ ಆರ್.ಟಿ.ಓ ಕಚೇರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್  ಮಿಂಚಿನ ಭೇಟಿ ನೀಡಿ ಕಕ್ಕಾಬಿಕ್ಕಿಗೊಳಿಸಿದ ಘಟನೆ ಆಲತ್ತೂರಲ್ಲಿ ನಡೆದಿದೆ. ಜನರೊಂದಿಗೆ ನೌಕರರ ವರ್ತನೆ ಗೌರವಯುತವಾಗಿರಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

               ಅರ್ಜಿ ಸಲ್ಲಿಸಿದ ಒಂದು ವರ್ಷದ ನಂತರವೂ ವಾಹನದ ಆರ್‍ಸಿ. ಪಡೆದಿಲ್ಲ ಎಂದು ದೂರಿನೊಂದಿಗೆ ಬಂದವರಿಗೆ ತಕ್ಷಣ ನೀಡುವಂತೆ ಸೂಚನೆಗಳನ್ನು ನೀಡಲಾಯಿತು ಗಣೇಶ್ ಕುಮಾರ್ ಮಾತನಾಡಿ, ಕಚೇರಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ನಿಟ್ಟಿನಲ್ಲಿ ತಿಂಗಳಿಗೊಮ್ಮೆ ‘ಸ್ಮಾರ್ಟ್ ಶನಿವಾರ’ ಆಯೋಜಿಸಬೇಕು’ ಎಂದು ಸಲಹೆ ನೀಡಿದರು.

           ಶುಕ್ರವಾರ ಎರಡೂವರೆ ಗಂಟೆಗೆ ಸಚಿವರು ಆಗಮಿಸಿದ್ದರು. ಆಲತ್ತೂರು ಮಿನಿ ಸಿವಿಲ್ ಸ್ಟೇಷನ್ ಸಭಾಂಗಣದಲ್ಲಿ ಆಲತ್ತೂರು ತಾಲೂಕು ಸಾರ್ವಜನಿಕ ಸೇವಕರ ಸಹಕಾರ ಸಂಘದ ವತಿಯಿಂದ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಆಗಮಿಸಿದಾಗ ಈ ಹಠಾತ್ ಭೇಟಿ ನೀಡಿದರು. 

             ಶೀಘ್ರವೇ ನೇಮಕಗೊಂಡವರು ಆಗಮಿಸಲಿದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿದರು. ಪಾಲಕ್ಕಾಡ್ ಆರ್.ಟಿ.ಒ ಜೆ. ಜೆರ್ಸನ್, ಆಲತ್ತೂರು ಎಂ.ವಿ.ಐ. ಎಸ್. ಸಮೀಶ್, ಎ.ಎಂ.ವಿ.ಐ. ವಿ. ವಿಪಿನ್ ಹಾಗೂ ಸಿಬ್ಬಂದಿ ಮೊದಲು ತಡಬಡಾಯಿಸಿದರೂ ಕಚೇರಿಯ ಕಾರ್ಯವೈಖರಿ ವಿವರಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries