HEALTH TIPS

ಬಾಂಗ್ಲಾದಲ್ಲಿ: ಪ್ರತಿಭಟನಾ ನಿರತರ ಹತ್ಯೆ ಅಸ್ಥಿರ ರಾಷ್ಟ್ರಕ್ಕೆ ಭೇಟಿ ನೀಡಲಿರುವ ವಿಶ್ವಸಂಸ್ಥೆ ತಂಡ

ಬಾಂಗ್ಲಾದೇಶ: ವಿಶ್ವಸಂಸ್ಥೆಯ ತಂಡ ಬಾಂಗ್ಲಾದೇಶಕ್ಕೆ ಮುಂದಿನ ವಾರ ಭೇಟಿ ನೀಡಲಿದ್ದು, ಪ್ರತಿಭಟನಾ ನಿರತರ ಹತ್ಯೆಯ ಬಗ್ಗೆ ತನಿಖೆ ನಡೆಸಲಿದೆ.

ಕಳೆದ ವಾರ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ನಡೆದಿದ್ದ ಹಿಂಸಾಚಾರದಲ್ಲಿ ಪ್ರತಿಭಟನಾ ನಿರತರನ್ನು ಹತ್ಯೆ ಮಾಡಲಾಗಿತ್ತು 1971 ರಲ್ಲಿ ಬಾಂಗ್ಲಾಗೆ ಸ್ವಾತಂತ್ರ್ಯ ದೊರೆತ ಬಳಿಕ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆ ತಂಡ ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದು ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಲಿದೆ.

ಯುಎನ್ ತಂಡ ಭೇಟಿ ನೀಡುವುದರ ಬಗ್ಗೆ ಬಾಂಗ್ಲಾ ಸರ್ಕಾರಿ ಸಲಹೆಗಾರರೊಬ್ಬರು ಮಾಹಿತಿ ನೀಡಿದ್ದಾರೆ. ಮುಹಮ್ಮದ್ ಯೂನಸ್ ಅವರು ಆ.8 ರಂದು ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಪ್ರಮಾಣವಚನ ಸ್ವೀಕರಿಸಿದರು, ಶೇಖ್ ಹಸೀನಾ ಅವರ ಸರ್ಕಾರ ಪತನಗೊಂಡ ಕೆಲವು ದಿನಗಳ ನಂತರ ಮತ್ತು ಅವರು ಆಗಸ್ಟ್ 5 ರಂದು ಸರ್ಕಾರಿ ಉದ್ಯೋಗಗಳಿಗೆ ಕೋಟಾ ಸುಧಾರಣೆಗಳ ಮೇಲೆ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries