ಕೋಝಿಕ್ಕೋಡ್: ಮುಲ್ಲಪೆರಿಯಾರ್ನಲ್ಲಿ ಹೊಸ ಅಣೆಕಟ್ಟು ನಿರ್ಮಾಣಕ್ಕೆ ಪರ್ಯಾಯ ಪ್ರಸ್ತಾವನೆಯೊಂದಿಗೆ ಮೆಟ್ರೋಮ್ಯಾನ್ ಇ ಶ್ರೀಧರನ್ ಸಲಹೆ ನೀಡಿದ್ದಾರೆ. ಜಲಾಶಯದಿಂದ ತಮಿಳುನಾಡಿಗೆ ನೀರು ಸಂಗ್ರಹಿಸಲು ಸುರಂಗ ಹಾಗೂ ಕಿರು ಅಣೆಕಟ್ಟುಗಳನ್ನು ನಿರ್ಮಿಸಿದರೆ ಕೇರಳ ಎದುರಿಸುತ್ತಿರುವ ಭೀತಿಗೆ ತಾತ್ಕಾಲಿಕ ಮುಕ್ತಿ ಸಿಗಲಿದೆ ಎಂದಿರುವರು.
ಕೋಝಿಕ್ಕೋಡ್ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ತಮಿಳುನಾಡಿಗೆ ನೀರು ಹರಿಸಲು ಸುರಂಗ ಮಾರ್ಗ ನಿರ್ಮಿಸಿದರೆ 50 ವರ್ಷಗಳ ಕಾಲ ಹೊಸ ಅಣೆಕಟ್ಟು ಕಟ್ಟುವ ಅವಶ್ಯಕತೆ ಇರುವುದಿಲ್ಲ ಎಂದರು. ಹೊಸ ಅಣೆಕಟ್ಟು ಕಟ್ಟುವ ಅಗತ್ಯವಿಲ್ಲ ಎಂಬುದು ತಮಿಳುನಾಡಿನ ವಾದ. ಆದರೆ ಅಣೆಕಟ್ಟನ್ನು ಬಲಪಡಿಸಲು ಪ್ರಾಯೋಗಿಕ ತೊಂದರೆಗಳಿಂದಾಗಿ ಅಧಿಕಾರಿಗಳು ಹೊಸ ಅಣೆಕಟ್ಟನ್ನು ಪ್ರಸ್ತಾಪಿಸಿದರು.
ಸುರಂಗ ನಿರ್ಮಿಸುವ ಮೂಲಕ ಇಂತಹ ಆತಂಕಗಳನ್ನು ಪರಿಹರಿಸಬಹುದು ಎಂದು ಇ ಶ್ರೀಧರನ್ ಹೇಳಿದ್ದಾರೆ. ಮುಲ್ಲಪೆರಿಯಾರ್ನಿಂದ ನೀರು ಪಡೆಯುವಲ್ಲಿ ತಮಿಳುನಾಡಿಗೆ ಬೇರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪರ್ಯಾಯ ಪ್ರಸ್ತಾವನೆ ಕಾರ್ಯಸಾಧ್ಯವೇ ಎಂಬುದನ್ನು ಪರಿಶೀಲಿಸುವುದಾಗಿ ಮುಲ್ಲಪೆರಿಯಾರ್ ಸಮರ ಸಮಿತಿ ಅಧ್ಯಕ್ಷ ಶಾಜಿ ತಿಳಿಸಿದ್ದಾರೆ.