HEALTH TIPS

ಬಜೆ: ತಾಳಮದ್ದಳೆ-ಪ್ರಶಸ್ತಿ ಪ್ರದಾನ-ಬಯಲಾಟ ಇಂದು

          ಮಂಜೇಶ್ವರ: ಶ್ರೀ ಗುರುನರಸಿಂಹ ಯಕ್ಷ ಬಳಗ ಮೀಯಪದವು ತಂಡದ ವಾರ್ಷಿಕ ಕಾರ್ಯಕ್ರಮ ಯಕ್ಷ ಚಿಗುರು-2024 ಅ.10ನೇ ಶನಿವಾರ ಅಪರಾಹ್ನ 2 ರಿಂದ ಶ್ರೀ ಮಹಾವಿಷ್ಣುದೇವಸ್ಥಾನ ದೇಲಂತೊಟ್ಟು ಬಜೆ ಕ್ಷೇತ್ರದಲ್ಲಿ ಜರಗಲಿದೆ.

           ಅಪರಾಹ್ನ ಪ್ರಸಿದ್ಧ ಕಲಾವಿದರಿಂದ ತಾಳಮದ್ದಳೆ `ಕರ್ಣಭೇದನ' ನಡೆಯಲಿದ್ದು, ಹಿಮ್ಮೇಳದಲ್ಲಿ ಕಾವ್ಯಶ್ರೀ ಅಜೇರು, ಲವಕುಮಾರ್ ಐಲ, ವಂದನಾ ಮಾಲೆಂಕಿ ಭಾಗವಹಿಸಲಿದ್ದಾರೆ. ಅರ್ಥಧಾರಿಗಳಾಗಿ ವಾಸುದೇವ ರಂಗಾ ಭಟ್ ಮಧೂರು, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ನಾ.ಕಾರಂತ ಪೆರಾಜೆ ಕಾಣಿಸಿಕೊಳ್ಳಲಿದ್ದಾರೆ.

          ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಡಾ.ಗಿರಿಧರರಾವ್ ಎಂ.ಎಸ್. ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯಅಭ್ಯಾಗತರಾಗಿ ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟ, ಜಗದೀಶ ಶೆಟ್ಟಿ ಎಲಿಯಾಣ,  ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು, ದಾಮೋದರ ಮಯ್ಯ ಬಜೆ, ದೇವಕಾನ ಶ್ರೀಕೃಷ್ಣ ಭಟ್ ಉಪಸ್ಥಿತರಿರುವರು.

              ಯಕ್ಷ ಚಿಗುರು-24 ವಾರ್ಷಿಕ ಪ್ರಶಸ್ತಿಯನ್ನು ಗಣೇಶ ಕಲಾವೃಂದ ಪೈವಳಿಕೆ ಕಲಾಸಂಸ್ಥೆಗೆ ನೀಡಲಾಗುವುದು. ಸಂಜೆ 6 ರಿಂದ ಗುರುನರಸಿಂಹ ಯಕ್ಷ ಬಳಗ ಮೀಯಪದವು ತಂಡದ ಸದಸ್ಯರಿಂದ ಯಕ್ಷಗಾನ ಬಯಲಾಟ `ದಕ್ಷಾಧ್ವ್ವರ-ಗಿರಿಜಾ ಕಲ್ಯಾಣ'ಜರಗಲಿದೆ ಎಂದು ಯಕ್ಷ ಬಳಗ ಪ್ರಕಟಣೆ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries