ಕಾಸರಗೋಡು: ವಯನಾಡ್ ದುರಂತ ಸಂತ್ರಸ್ತರಿಗೆ ಸಾಂತ್ವನ ಒದಗಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಆಹಾರ, ಬಟ್ಟೆ ಹಾಗೂ ಇತರ ಸಾಮಗ್ರಿ ಹೊತ್ತ ಮೊದಲ ವಾಹನವನ್ನು ವಯನಾಡಿಗೆ ಕಳುಹಿಸಲಾಯಿತು.
ಜಿಲ್ಲಾಧಿಕಾರಿ ಸಭಾಂಗಣದ ಎದುರು ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ವಾಹನ ಬೀಳ್ಕೊಟ್ಟರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಜ್ ಪಾದೂರು ವಸ್ತು ಸಂಗ್ರಹಣಾ ಕೇಂದ್ರದ ಪ್ರಭಾರಿ, ಸಹಾಯಕ ಜಿಲ್ಲಾಧಿಕಾರಿ (ಎಂಡೋಸಲ್ಫಾನ್ ಸೆಲ್) ಪಿ.ಸುರ್ಜಿತ್ ಜಿಲ್ಲಾ ಉದ್ಯೋಗಾಧಿಕಾರಿ ಅಜಿತ್ ಜಾನ್, ಹುಸೂರು ಶಿರಸ್ತೇದಾರ್ ಆರ್. ರಾಜೇಶ್, ಪ್ರಭಾಕರನ್ ಭಾಗವಹಿಸಿದ್ದರು.