ವಯನಾಡಿನಲ್ಲಿ ಅದೆಷ್ಟೊ ಜನರ ಪ್ರಾಣ ಹಾನಿಗೆ ಕಾರಣವಾಗಿರುವ ಭೀಕರ ಭೂಕುಸಿತದಿಂದ ಉಂಟಾಗಿರುವ ದುರ್ಘಟನೆಯು ಅತ್ಯಂತ ದು:ಖಕರವಾಗಿದೆ ಎಂದು ಕೊಂಡೆವೂರು ಮಠದ ಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಖೇದ ವ್ಯಕ್ತಪಡಿಸಿದ್ದಾರೆ. ಪ್ರಕೃತಿ ಮಾತೆ ಶಾಂತಳಾಗಿ ಜೀವ ರಾಶಿಗಳ ಮೇಲೆ ಕೃಪೆತೋರುವಂತಾಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ.