ಉಪ್ಪಳ: ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಅಳಿಕೆ ಕೇಕಣಾಜೆಯಿಂದ ನಾಪತ್ತೆಯಾಗಿದ್ದ ರಾಮಚಂದ್ರ ಭಟ್(62)ಎಂಬವರ ಮೃತದೇಹ ಪೈವಳಿಕೆ ಪಂಚಾಯಿತಿಯ ಬಳ್ಳೂರು ಹೊಳೆಯ ವಾಟೆಪಡ್ಪು ಎಂಬಲ್ಲಿನ ಸೇತುವೆ ಬಳಿ ಪತ್ತೆಯಗಿದೆ. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯನ್ವಯ ಮಂಜೇಶ್ವರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮೃತದೇಹ ಮೇಲಕ್ಕೆತ್ತಿ ಮಂಗಲ್ಪಾಡಿ ತಾಲೂಕಾಸ್ಪತ್ರೆಗೆ ರವಾನಿಸಿದ್ದಾರೆ.
ರಾಮಚಂದ್ರ ಭಟ್ ಅವರ ಸಂಬAಧಿಕರು ಮೃತದೇಹದ ಗುರುತು ಪತ್ತೆಹಚ್ಚಿದ್ದಾರೆ. ರಾಮಚಂದ್ರ ಭಟ್ ಸೋಮವಾರ ವಿಟ್ಲ ಪೇಟೆಗೆ ತೆರಳುವುದಾಗಿ ಮನೆಯಿಂದ ಹೊರಟಿದ್ದು, ವಾಪಸಾಗದ ಹಿನ್ನೆಲೆಯಲ್ಲಿ ಮನೆಯವರು ವಿಟ್ಲ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.