HEALTH TIPS

ಪತ್ತನಂತಿಟ್ಟದಲ್ಲಿ ಭೂ ಕಂಪನ ವದಂತಿಗಳು ಸುಳ್ಳು; ಜನರಲ್ಲಿ ಆತಂಕ ಮೂಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು: ಜಿಲ್ಲಾಧಿಕಾರಿ

                 ಪತ್ತನಂತಿಟ್ಟ: ಕೊನ್ನಿ ದಮ್ಮ ಗ್ರಾಮದ ವೇಟೂರಿನಲ್ಲಿ ನಿನ್ನೆ ಕೇಳಿಬಂದಿತೆನ್ನಲಾದ ಭೂಗರ್ಭದ ಶಬ್ದ ಸುಳ್ಳು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

         ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಜನರಲ್ಲಿ ಆತಂಕ ಮೂಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಪ್ರೇಮಕೃಷ್ಣನ್ ತಿಳಿಸಿದರು.

             ವಿವಿಧ ಜಿಲ್ಲೆಗಳಲ್ಲಿ ಭೂಗತದಿಂದ ರೇಡಿಯೋ ತರಂಗಾಂತರದಂತಹ ಶಬ್ದ  ಕೇಳಿಬರುತ್ತಿದೆ ಎಂಬ ಸುದ್ದಿ ನಿನ್ನೆ ಬೆಳಗ್ಗೆಯಿಂದ ಹರಡಿತ್ತು. 

             ಪಾಲಕ್ಕಾಡ್ ಜಿಲ್ಲೆಯ ಮನ್ನಾರ್ಕಾಡ್ ಮತ್ತು ಒಟ್ಟಪಾಲಂನಲ್ಲಿ ಭೂಕಂಪದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮನ್ನಾಕ್ರ್ಕಾಡ್ನ ಅಲನಲ್ಲೂರಿನಲ್ಲಿ ಕೇಂದ್ರವಿತ್ತೆನ್ನಲಾಗಿತ್ತು. ಒಟ್ಟಪಾಲಂನ ಅಕಲೂರು ಮತ್ತು ಚಲವರದಲ್ಲೂ ಕಂಪನದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಪಾಲಕ್ಕಾಡ್ ನಲ್ಲೂ ಕಂಪನದ ಅನುಭವವಾಗಿದೆ ಎಂದು ಸ್ಥಳೀಯರು ಬಹಿರಂಗಪಡಿಸಿದ್ದಾರೆ. ಮಲಪ್ಪುರಂನಲ್ಲಿ ಎಡಪಾಲದ ವಿಕೆ ಪಾಡಿ ಸುತ್ತಮುತ್ತ ಕಂಪನವಾಗಿದೆ ಎನ್ನಲಾಗಿದೆ. 

           ವಯನಾಡಿನ ಅಂಬಲವಾಯಲ್‍ನಲ್ಲಿ ಭೂಗತ ಶಬ್ದ ಕೇಳಿಬಂದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಏತನ್ಮಧ್ಯೆ ಅನಪಾರ, ಧಾಮತುವಾಯಲ್ ಮತ್ತು ಎಡಕ್ಕಲ್ ಪ್ರದೇಶಗಳಲ್ಲಿ ಶಬ್ದ ಕೇಳಿಬಂದಿದೆ, ವಯನಾಡಿನಲ್ಲಿ ಸಂಭವಿಸಿದ ಕಂಪನಗಳು ಭೂಕಂಪವಲ್ಲ ಎಂದು ಸರ್ಕಾರ ತಿಳಿಸಿದೆ.





Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries