ಬದಿಯಡ್ಕ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮಹಾಸಭೆ ಭಾನುವಾರ ಬದಿಯಡ್ಕದ ಶ್ರೀ ಗಣೇಶ ಮಂದಿರದಲ್ಲಿ ನಡೆಯಿತು. ೨೦೨೪-೨೫ನೇ ಸಾಲಿನ ಸಾಲಿನ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ನರೇಂದ್ರ. ಬಿ. ಯನ್., ಪ್ರಧಾನ ಕಾರ್ಯದರ್ಶಿಯಾಗಿ ಗುರುಪ್ರಸಾದ್ ರೈ ಕೆ. ಹಾಗೂ ಕೋಶಾಧಿಕಾರಿಯಾಗಿ ದೇವದಾಸ್ ಕಾಮತ್, ಉಪಾಧ್ಯಕ್ಷರುಗಳಾಗಿ ವಿಜಯ ಸಾಯಿ, ಗಣೇಶ ರೈ ವಳಮಲೆ, ಗಿರೀಶ್ ರೈ ವಳಮಲೆ, ಕಾರ್ಯದರ್ಶಿಗಳಾಗಿ ಗೋಪಾಲಕೃಷ್ಣ(ಗೋಕುಲು) ಮೂಕಾಂಪರೆ, ರಾಜೇಶ್ ಬಿ. ಕೆ, ಶಿವಪ್ರಸಾದ್ ವಿ. ಯಂ, ಸಹಕೋಶಾಧಿಕಾರಿಯಾಗಿ ಗುರುಪ್ರಸಾದ್ ಶೆಣೈ, ಲೆಕ್ಕ ಪರಿಶೋಧಕರುಗಳಾಗಿ ಪ್ರದೀಪ್ ಕುಮಾರ್ ಕೆ. ಯಂ, ಹಿತೇಶ್ ಯಂ ಇವರನ್ನು ಆರಿಸಲಾಯಿತು. ವಯನಾಡು ದುರಂತದಲ್ಲಿ ಮಡಿದವರಿಗೆ ಹಾಗೂ ಇತ್ತೀಚೆಗೆ ನಿಧನರಾದ ಉತ್ಸವ ಸಮಿತಿಯ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಪೆರ್ಮುಖ ಇವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ೫೩ ನೇ ವರ್ಷದ ಗಣೇಶೋತ್ಸವ ಆಚರಣೆಯ ಕುರಿತು ಚರ್ಚಿಸಿ ಕಾರ್ಯಕ್ರಮಗಳಿಗೆ ರೂಪುರೇಷೆ ನೀಡಲಾಯಿತು. ನಿಕಟಪೂರ್ವ ಅಧ್ಯಕ್ಷ ಕರಿಂಬಿಲ ಲಕ್ಷಣ ಪ್ರಭು ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನರೇಂದ್ರ. ಬಿ. ಯನ್ ಸ್ವಾಗತಿಸಿ, ರಾಜೇಶ್ ಬಿ. ಕೆ ವಂದಿಸಿದರು.