HEALTH TIPS

ಸಂತ್ರಸ್ತರ ಶಿಬಿರಕ್ಕೆ ಜಿಲ್ಲಾಧಿಕಾರಿ ಭೇಟಿ

              ಕಾಸರಗೋಡು: ಧಾರಾಕಾರ ಮಳೆಯ ಪರಿಣಾಮವಾಗಿ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಚುಳ್ಳಿಕರೆ ಜಿ.ಎಲ್.ಪಿ. ಶಾಲೆಯಲ್ಲಿ ಸಿದ್ಧಪಡಿಸಿದ ಸಂತ್ರಸ್ತರ ಶಿಬಿರಕ್ಕೆ ಶಾಸಕ ಇ.ಚಂದ್ರಶೇಖರನ್, ಜಿಲ್ಲಾಧಿಕಾರಿ ಕೆ.ಇನ್ಭಾಶೇಖರ್ ಸಂದರ್ಶಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ನೀಡಿರುವ ಜಾಗ್ರತೆ ನಿರ್ದೇಶಗಳನ್ನು ಪಾಲಿಸಬೇಕೆಂದು, ಶಿಬಿರದಲ್ಲಿರುವ ಸಂತ್ರಸ್ತರಿಗೆ ಅಗತ್ಯದ ಎಲ್ಲಾ ಸೌಕರ್ಯಗಳನ್ನು ಏರ್ಪಡಿಸಲಾಗಿದೆ ಎಂದು ಶಾಸಕ ಇ.ಚಂದ್ರಶೇಖರನ್ ಹೇಳಿದರು. 

            ಈ ಶಿಬಿರದಲ್ಲಿ ಕುಟ್ಟಿಕಾನಂ, ಓಟ್ಟಕಂಡA, ನೀಲಮಲ ಮೊದಲಾದ ಸ್ಥಳಗಳ 26 ಪರಿಶಿಷ್ಟ ವರ್ಗ ಕುಟುಂಬಕ್ಕೆ ಸೇರಿದ 27 ಗಂಡಸರು, 39 ಮಹಿಳೆಯರು, 34 ಮಕ್ಕಳು ಸಹಿತ 100 ಮಂದಿ ಇದ್ದಾರೆ. ಇವರಲ್ಲಿ 12 ಮಂದಿ ಹಿರಿಯ ನಾಗರಿಕರು, ಒಂದು ನವಜಾತ ಶಿಶುವಿದೆ. 

            ಪಂಚಾಯತಿ ಅಧ್ಯಕ್ಷ ಟಿ.ಕೆ.ನಾರಾಯಣನ್, ಸಬ್ ಕಲೆಕ್ಟರ್ ಸೂಫಿಯಾನ್ ಅಹಮ್ಮದ್, ಜಿಲ್ಲಾ ಪಂಚಾಯತಿ ಸದಸ್ಯ ಶಿನೋಜ್ ಚಾಕೋ, ಕುಟ್ಟಿಕ್ಕೋಲ್ ಪಂಚಾಯತಿ ಅಧ್ಯಕ್ಷ ಮುರಳಿ ಪಯ್ಯಂಗಾನA, ಪಂಚಾಯತಿ ಜೋಯಿಂಟ್ ಡೈರೆಕ್ಟರ್ ಜೇಸನ್ ಮ್ಯಾಥ್ಯೂ, ತಹಶೀಲ್ದಾರ್ ಪಿ.ವಿ.ಮುರಳಿ, ಬಿಜು, ವಿಲೇಜ್ ಆಫೀಸರ್ ರುಖಿಯಾ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries