HEALTH TIPS

ಗುರುವಾಯೂರು ಪ್ರಕರಣ: ಮಧ್ಯಪ್ರವೇಶಿಸಲು ಹೈಕೋರ್ಟ್ ನಿರಾಕರಣೆ

                  ಗುರುವಾಯೂರು: ಈ ಬಾರಿ ಗುರುವಾಯೂರು ದೇವಸ್ಥಾನದಲ್ಲಿ ಕೊಡಿಮರ ಸನಿಹ ಇಲ್ಲಂನಿರಾ ಪೂಜೆಯನ್ನು ನಿಲ್ಲಿಸಬೇಕೆಂಬ ಮನವಿಗೆ ಮಧ್ಯಪ್ರವೇಶಿಸಲು ಹೈಕೋರ್ಟ್ ನಿರಾಕರಿಸಿದೆ.

              ದೇವಸ್ವಂ ಆಡಳಿತ ಮಂಡಳಿಯ ಕೊಡಿಮರ ಸಮೀಪದಲ್ಲಿ ಪೂಜೆ ಸಲ್ಲಿಸುವ ನಿರ್ಧಾರವು ದೇವರ ಹಿತಾಸಕ್ತಿ ಮತ್ತು ತಂತ್ರಿಗಳ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ವಿಭಾಗೀಯ ಪೀಠ ಹೇಳಿದೆ. ಹಾಗಾಗಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ದೇವಸ್ವಂ ಪೀಠ ಸ್ಪಷ್ಟಪಡಿಸಿದೆ.

              ಭಕ್ತರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಕೊಡಿಮರ ಸಮೀಪದಲ್ಲಿ ಪೂಜೆ ನಡೆಸಲು ನಿರ್ಧರಿಸಲಾಗಿದೆ ಎಂದು ಸ್ಥಾಯಿ ವಕೀಲ ಟಿ.ಕೆ. ವಿಪಿಂದಾಸ್ ನ್ಯಾಯಾಲಯಕ್ಕೆ ತಿಳಿಸಿದರು. ಪೂಜೆ ನಮಸ್ಕಾರ ಮಂಟಪದಲ್ಲಿ ನಡೆಸಬೇಕೆಂದು ಅರ್ಜಿದಾರರು ಮನವಿ ಮಾಡಿದ್ದರು.

            ಅರ್ಜಿದಾರರು ಅನಾವಶ್ಯಕ ವಿವಾದ ಸೃಷ್ಟಿಸಲು ಯತ್ನಿಸುತ್ತಿದ್ದು, ದೇವಸ್ಥಾನದಲ್ಲಿ ದಟ್ಟಣೆ ತಪ್ಪಿಸಲು ಹೊಸ ನಿರ್ಧಾರ ಸಹಕಾರಿಯಾಗಲಿದೆ ಎಂದು ದೇವಸ್ವಂ ಕೋರ್ಟ್‍ಗೆ ಸಲ್ಲಿಸಿರುವ ಪ್ರತಿವಾದಿ ಅಫಿಡವಿಟ್‍ನಲ್ಲಿ ತಿಳಿಸಿತ್ತು.

           ನಿನ್ನೆ ವಿಶೇಷ ಅಧಿವೇಶನದಲ್ಲಿ ನ್ಯಾಯಮೂರ್ತಿಗಳಾದ ಅನಿಲ್ ಕೆ. ನರೇಂದ್ರ ಮತ್ತು ಹರಿಶಂಕರ್ ವಿ. ಮೆನನ್ ಅವರಿದ್ದ ವಿಭಾಗೀಯ ಪೀಠ ಪ್ರಕರಣವನ್ನು ವಿಚಾರಣೆ ನಡೆಸಿತು. ಗುರುವಾಯೂರ್ ನಲ್ಲಿ ಇಂದು ಜನದಟ್ಟಣೆ ಕಡಿಮೆಯಿತ್ತು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries