HEALTH TIPS

ಎಡನೀರು ಶ್ರೀ ಮಠದಲ್ಲಿ ಆರಾಧನೋತ್ಸವ; ವೃಂದಾವನ ಪೂಜೆ

           ಬದಿಯಡ್ಕ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಚತುರ್ಥ ವಾರ್ಷಿಕ ಆರಾಧನೆ ಶುಕ್ರವಾರ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರಗಿತು. 

             ಬೆಳಗ್ಗೆ ಮಹಾಪೂಜೆ, ಧ್ವಜಾರೋಹಣ ನಂತರ ಶ್ರೀ ಮಹಾದೇವಿ ಭನಾ ಮಂಡಳಿ ಕಳತ್ತೂರು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಯಜ್ಞೇಶ ಆಚಾರ್ಯ ಸುಬ್ರಹ್ಮಣ್ಯ ಇವರಿಂದ ಭಕ್ತಿಸಂಗೀತ ನಡೆಯಿತು. ಹಾರ್ಮೋನಿಯಂನಲ್ಲಿ ಸತ್ಯನಾರಾಯಣ ಐಲ, ತಬ್ಲಾದಲ್ಲಿ ಲವಕುಮಾರ್ ಐಲ, ರಿದಂ ಪೇಡ್‍ನಲ್ಲಿ ಸುಮನ್ ದೇವಾಡಿಗ ಪುತ್ತೂರು ಜೊತೆಗೂಡಿದರು. ಮಧ್ಯಾಹ್ನ ಮಹಾಪೂಜೆ, ವೃಂದಾವನ ಪೂಜೆ, ಮಂತ್ರಾಕ್ಷತೆ ನಡೆಯಿತು. ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಟಿ.ಶ್ಯಾಮ ಭಟ್, ಅಧ್ಯಕ್ಷ ಬಲರಾಮ ಆಚಾರ್ಯ, ಹೊರನಾಡು ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಧರ್ಮದರ್ಶಿ  ಭೀಮೇಶ್ವರ ಜೋಷಿ, ಸುರೇಶ್ ನಾಯಕ್ ಪೂನಾ, ನ್ಯಾಯವಾದಿ ಎಂ.ನಾರಾಯಣ ಭಟ್, ಹಿರಿಯ ವೈದ್ಯ ಡಾ.ಬಿ.ಎಸ್.ರಾವ್ ಕಾಸರಗೋಡು, ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್, ಕೆಯ್ಯೂರು ನಾರಾಯಣ ಭಟ್ ಹಾಗೂ ಗಣ್ಯರು ಶಿಷ್ಯವೃಂದದವರು ಪಾಲ್ಗೊಂಡು ಶ್ರೀ ಗುರುದೇವತಾ ಪ್ರಸಾದ ಸ್ವೀಕರಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries