ಪ್ರವಾಸಿ ತಾಣವಾಗಿದ್ದ ಸೀತಮ್ಮಕುಂಡ್ ನಕ್ಷೆಯಿಂದ ಅಳಿಸಿಹೋಗಿದೆ. ಈ ಜಲಪಾತ ಪ್ರವಾಸಿಗರ ನೆಚ್ಚಿನ ತಾಣವಾಗಿತ್ತು.
ಸೀತಮ್ಮಕುಂಡ್ ಪ್ರಮುಖ ಆಕರ್ಷಣೆಯೆಂದರೆ ಕಲ್ಲಿನ ರಚನೆಗಳ ನಡುವಿನ ಸಣ್ಣ ಜಲಪಾತ ಮತ್ತು ಕೆಳಭಾಗದಲ್ಲಿರುವ ಕಲ್ಲಿನಿಂದಾವೃತವಾದ ಕೆರೆ.
ಸೀತೆ ವನವಾಸದ ಸಂದರ್ಭ ಸ್ನಾನ ಮಾಡಿದ ಕೆರೆ ಇದೆಂದು ನಂಬಲಾಗಿದೆ. ೨೦೧೯ ರ ಪ್ರವಾಹದ ಸಮಯದಲ್ಲಿ, ಸೀತಮ್ಮಕುಂಡ್ ಬಳಿ ಭೂಕುಸಿತ ಸಂಭವಿಸಿತ್ತು. ಇದಾದ ಬಳಿಕ ಮೆಪ್ಪಾಡಿ ಪಂಚಾಯಿತಿ ಇಲ್ಲಿ ಪ್ರವೇಶ ನಿಷೇಧಿಸಿತ್ತು. ಈ ಜಲಪಾತವು ಕಾಡಿನಿಂದ ಹರಿಯುವ ಝರಿಯ ಒಂದು ಭಾಗವಾಗಿದೆ. ಮುಂಡಕೈ ಮಾರಿಯಮ್ಮನ್ ದೇವಸ್ಥಾನದ ಉತ್ಸವದ ಅಂಗವಾಗಿ ಇಲ್ಲಿ ಕುಂಭಾಭಿಷೇಕ ನಡೆಸಲಾಗುತ್ತದೆ. ಈ ಜಲಪಾತವು ಚುರಲ್ಮಲಾದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದೆ.
ಪ್ರಕೃತಿ ಸೌಂದರ್ಯದಿAದ ಕೂಡಿದ್ದ ನಾಡು ಭೂಮಿಯಿಂದ ಕಣ್ಮರೆಯಾಗಿದೆ. ಮುಂಡಕೈ ಚಹಾ ತೋಪುಗಳು, ಏಲಕ್ಕಿ ತೋಟಗಳು, ಹಿಮದಿಂದ ಆವೃತವಾದ ಬೆಟ್ಟಗಳು ಮತ್ತು ಜಲಪಾತಗಳಿಂದ ತುಂಬಿದ ಸುಂದರವಾದ ಹಳ್ಳಿಯಾಗಿತ್ತು. ಅನೇಕ ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದವು. ಕರಾಳ ರಾತ್ರಿ ಎಲ್ಲರೂ ಇತಿಹಾಸವಾದರು.