HEALTH TIPS

ಮಹಿಳೆಯರ ಮೇಲಿನ ದೌರ್ಜನ್ಯ ಕ್ಷಮಿಸಲಾಗದ ಪಾಪ: ಪ್ರಧಾನಿ ಮೋದಿ

           ಲಗಾಂವ್‌ : ಮಹಿಳೆಯರ ಮೇಲಿನ ದೌರ್ಜನ್ಯ ಕ್ಷಮಿಸಲಾಗದ ಪಾಪ. ತಪ್ಪಿತಸ್ಥರನ್ನು ಬಿಡಬಾರದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

          ಉತ್ತರ ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯಲ್ಲಿ 'ಲಕ್‌ಪತ್‌ ದೀದಿ ಸಮ್ಮೇಳನ'ದಲ್ಲಿ ಮಾತನಾಡಿದ ಮೋದಿ, ಕೋಲ್ಕತ್ತ ಆರ್‌.ಜಿ ಕರ್‌ ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಹತ್ಯೆಯ ಘಟನೆಯನ್ನು ತೀವ್ರವಾಗಿ ಖಂಡಿಸಿದರು.

          'ಅಮ್ಮಂದಿರು, ಅಕ್ಕಂದಿರುವ ಮತ್ತು ಹೆಣ್ಣುಮಕ್ಕಳ ಸುರಕ್ಷತೆ ದೇಶದ ಪ್ರಮುಖ ಆದ್ಯತೆ. ದೇಶದ ಯಾವುದೇ ರಾಜ್ಯವಿರಲಿ, ಪ್ರತಿ ಹೆಣ್ಣಿನ ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಈ ವಿಚಾರವನ್ನು ನಾನು ಕೆಂಪು ಕೋಟೆಯಿಂದ ಪದೇ ಪದೇ ಪ್ರಸ್ತಾಪಿಸಿದ್ದೇನೆ ಎಂದರು.

             'ಹೆಣ್ಣಿನ ಮೇಲಿನ ದೌರ್ಜನ್ಯ ಕ್ಷಮಿಸಲಾರದ ಪಾಪ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಪ್ರತಿ ರಾಜಕೀಯ ಪಕ್ಷ, ಪ್ರತಿ ಸರ್ಕಾರಕ್ಕೆ ಈ ಮೂಲಕ ತಿಳಿಸುತ್ತೇನೆ. ಅಲ್ಲದೆ ಹೆಣ್ಣಿನ ಮೇಲೆ ದೌರ್ಜನ್ಯ ನಡೆಸಲು ಸಹಾಯ ಮಾಡಿದವರೂ ತಪ್ಪಿತಸ್ಥರೇ ಆಗಿರುತ್ತಾರೆ, ಅದು ಆಸ್ಪತ್ರೆ, ಶಾಲೆ, ಸರ್ಕಾರ ಅಥವಾ ಪೊಲೀಸ್‌ ಇಲಾಖೆ ಎಲ್ಲೇ ಆಗಲಿ ನಿರ್ಲಕ್ಷ ಕಂಡುಬಂದರೆ, ಅಲ್ಲಿರುವ ಎಲ್ಲರೂ ಜವಾಬ್ದಾರರಾಗಿರುತ್ತಾರೆ. ಇದು ಮೇಲಿನ ಹುದ್ದೆಗಳಲ್ಲಿರುವವರಿಂದ ಹಿಡಿದು ಕೆಳಗಿನ ಹುದ್ದೆಯವರೆಗೂ ಅನ್ವಯಿಸುತ್ತದೆ' ಎಂದರು.

           ' ಸರ್ಕಾರ ಬಂದು ಹೋಗುತ್ತದೆ. ಆದರೆ ಮಹಿಳೆಯರನ್ನು ರಕ್ಷಿಸುವುದು, ಅವರ ಗೌರವ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ' ಎಂದು ಪ್ರತಿಪಾದಿಸಿದರು.

             'ಲಕ್‌ಪತ್‌ ದೀದಿ ಯೋಜನೆ ಕೇವಲ ಮಹಿಳೆಯರ ಆದಾಯವನ್ನು ಹೆಚ್ಚಿಸುವುದಲ್ಲ, ಮುಂದಿನ ಪೀಳಿಗೆಯನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ. ಭಾರತ ಆರ್ಥಿಕತೆಯಲ್ಲಿ 3ನೇ ಅತಿ ದೊಡ್ಡ ರಾಷ್ಟ್ರವಾಗಬೇಕೆಂದರೆ ಅದರಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು ಎಂದು ಈ ವೇಳೆ ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries