ಸಮರಸ ಚಿತ್ರಸುದ್ದಿ: ಕುಂಬಳೆ: ವಯನಾಡು ದುರಂತದಲ್ಲಿ ಸಂತ್ರಸ್ತರಿಗೆ ಪುತ್ತಿಗೆಯ ಮುಹಿಮ್ಮತ್ ಹೈಯರ್ ಸೆಕೆಂಡರಿ ಶಾಲೆಯ ವತಿಯಿಂದ ಪ್ರಥಮ ಹಂತದ ವಿವಿಧ ಆಹಾರ ಸಾಮಗ್ರಿಗಳ ಸಹಾಯವನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು. ಶಾಲಾ ನೌಕರ ಸಂಘದ ಕಾರ್ಯದರ್ಶಿ ಕೆ.ವಿ.ರೇಷ್ಮಾ ನೇತೃತ್ವದಲ್ಲಿ ಪ್ರಾಂಶುಪಾಲ ರೂಪೇಶ್ ಎ.ಟಿ, ಮುಖ್ಯೋಪಾಧ್ಯಾಯ ಅಬ್ದುಲ್ ಖಾದರ್, ನೌಕರ ಸಂಘದ ಸದಸ್ಯರಾದ ಅಹಮ್ಮದ್ ಸಾದಿಕ್, ಆಸಿಫ್ ಹುಸೂರ್ ಶಿರೆಸ್ತೇದಾರ್ ಎಂ.ವಿ.ರಾಜೇಶ್ ಅವರಿಗೆ ಹಸ್ತಾಂತರಿಸಿದರು.