ಕಾಸರಗೋಡು: ಬಿರುಸಿನ ಮಳೆಯ ಮರೆಯಲ್ಲಿ ಜಿಲ್ಲಾದ್ಯಂತ ಹೆಚ್ಚುತ್ತಿರುವ ಕಳವು ಪ್ರಕರಣದ ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡಗಳಿಗೆ ಪೊಲೀಸರು ರೂಪು ನೀಡಿದ್ದರೆ. ಕಾಸರಗೋಡು ಜಿಲ್ಲಾ ನ್ಯಾಯಾಲಯ, ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ಕಳವಿಗೆ ಯತ್ನ, ಮೊಗ್ರಾಲ್ನಲ್ಲಿರುವ ಸೌತ್ಬ್ಯಾಂಕ್ ಎಟಿಎಂನಿಂದ ಕಳವಿಗೆ ಯತ್ನ, ಚೆಂಗಳ ನಾಲ್ಕನೇಮೈಲಿಯ ಮರದ ಕಾರ್ಖಾನೆಯಿಂದ 2.76ಲಕ್ಷ ರೂ. ನಗದು ಕಳವು, ನಾಯಮರ್ಮೂಲೆಯ ಹೈಯರ್ಸೆಕೆಮಡರಿ ಶಾಲೆ ಕಚೇರಿ ಬೀಗ ಒಡೆದು ಕಳವಿಗೆ ಯತ್ಮ, ದೇಗುಲಗಳು, ಹಲವು ಮನೆಗಳು ಸೆರಿದಂತೆ ಹಲವಾರು ಕಳವು ಪ್ರಕರಣಗಳನ್ನು ಬೇಧಿಸುವ ನಿಟ್ಟಿನಲ್ಲಿ ಈ ವಿಶೇಷ ತಂಡ ರಚಿಸಲಾಗಿದೆ.
ಕಾಸರಗೋಡು ಡಿವೈಎಸ್ಪಿ ಸಿ.ಕೆ ಸುನಿಲ್ ಕುಮಾರ್ ಮೇಲ್ನೋಟ ಹಾಗೂ ವಿದ್ಯಾನಗರ ಠಾಣೆ ಇನ್ಸ್ಪೆಕ್ಟರ್ ಯು.ಪಿ ವಿಪಿನ್, ಕುಂಬಳೆ ಠಾಣೆ ಇನ್ಸ್ಪೆಕ್ಟರ್ ಕೆ.ಪಿ ವಿನೋದ್ ಕುಮಾರ್, ಮಂಜೇಶ್ವರ ಇನ್ಸ್ಪೆಕ್ಟರ್ ರಾಜೀವ್ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.