HEALTH TIPS

ವಿಪತ್ತು ಸಂತ್ರಸ್ತರ ನೆರವಿನ ನಿಧಿಯಿಂದ ಸಾಲದ ಮೊತ್ತ ಕಡಿತಗೊಳಿಸಿದ ಬ್ಯಾಂಕ್: ಕಲ್ಪಟ್ಟಾ ಗ್ರಾಮೀಣ ಬ್ಯಾಂಕ್ ಎದುರು ಯುವ ಸಂಘಟನೆಗಳಿಂದ ಪ್ರತಿಭಟನೆ

                  ಕಲ್ಪೆಟ್ಟ: ಚುರಲ್ಮಳ-ಮುಂಡಕೈ ದುರಂತ ಸಂತ್ರಸ್ತರಿಗೆ ಸರ್ಕಾರ ನೀಡಿದ ಆರ್ಥಿಕ ನೆರವಿನಿಂದ ಸಾಲದ ಮೊತ್ತವನ್ನು ವಸೂಲಿ ಮಾಡಿದ ಕಲ್ಪೆಟ್ಟದ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ ಎದುರು ವಿವಿಧ ಯುವ ಸಂಘಟನೆಗಳು ಪ್ರತಿಭಟನೆ ನಡೆಸಿದವು.

                   ಡಿವೈಎಫ್‍ಐ, ಯೂತ್ ಕಾಂಗ್ರೆಸ್, ಯೂತ್ ಲೀಗ್ ಬಹಿಷ್ಕಾರದೊಂದಿಗೆ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿವೆ. 

                ಮುಷ್ಕರವನ್ನು ತೀವ್ರಗೊಳಿಸಿದ ಸಂಘಟನೆಗಳು ಬ್ಯಾಂಕ್ ಮ್ಯಾನೇಜರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರತಿಭಟನಾಕಾರರು ಬ್ಯಾಂಕ್ ಕಟ್ಟಡಕ್ಕೆ ನುಗ್ಗಿ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು. ವಶಪಡಿಸಿಕೊಂಡ ಹಣವನ್ನು ಹಿಂತಿರುಗಿಸಲಾಗಿದೆ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದರೂ ವಿಪತ್ತು ಸಂತ್ರಸ್ತರು ಅದನ್ನು ನಂಬುವಂತಿಲ್ಲ ಎಂದು ಸಂಘಟನೆಗಳು ಆರೋಪಿಸಿವೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪೋಲೀಸರು ಮಧ್ಯ ಪ್ರವೇಶಿಸಿದರು. 

                 ಸಂತ್ರಸ್ತರಿಗೆ ಸರ್ಕಾರ ನೀಡಿದ ತುರ್ತು ನೆರವಿನಿಂದ ಬ್ಯಾಂಕ್ ಸಾಲದ ಹಣವನ್ನು ವಸೂಲುಮಾಡಿದೆ.  ಆದರೆ ಹಣ ವಾಪಸ್ ನೀಡಲಾಗಿದೆ ಎಂಬುದು ಬ್ಯಾಂಕ್ ಅಧಿಕಾರಿಗಳ ವಿವರಣೆ. ಆದರೆ ಹಣ ವಶಪಡಿಸಿಕೊಂಡವರ ಪಟ್ಟಿ ತೋರಿಸಬೇಕು. ಅದನ್ನು ಪರಿಶೀಲಿಸಿ ಧರಣಿ ಅಂತ್ಯಗೊಳಿಸಬಹುದು ಎಂಬುದು ಪ್ರತಿಭಟನಾಕಾರರ ನಿಲುವಾಗಿದೆ. ಸಮಸ್ಯೆ ಬಗೆಹರಿಯದಿದ್ದರೆ ಬ್ಯಾಂಕ್‍ನ ಇತರ ಶಾಖೆಗಳಿಗೂ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ತಿಳಿಸಿದರು.

             ಇದೇ ವೇಳೆ ಮುಂಡಕೈ ದುರಂತ ಸಂತ್ರಸ್ತರಿಗೆ ಸರ್ಕಾರ ನೀಡಿದ ತುರ್ತು ಆರ್ಥಿಕ ನೆರವಿನಿಂದ ಪಡೆದ ಸಾಲದ ಮೊತ್ತವನ್ನು ವಾಪಸ್ ನೀಡುವುದಾಗಿ ರಾಜ್ಯ ಮಟ್ಟದ ಬ್ಯಾಂಕಿಂಗ್ ಸಮಿತಿ ಪ್ರಕಟಿಸಿದೆ. ತಾಂತ್ರಿಕ ಕಾರಣಗಳಿಂದ ಸಂತ್ರಸ್ತರ ಆರ್ಥಿಕ ನೆರವಿನಿಂದ ಸಾಲ ಹಿಂಪÀಡೆಯಲಾಗಿದೆ ಎಂದು ಬ್ಯಾಂಕಿಂಗ್ ಸಮಿತಿ ತಿಳಿಸಿದೆ. ಜುಲೈ 30ರ ನಂತರ ಪಡೆದ ಸಾಲದ ಮೊತ್ತ ಮರುಪಾವತಿಗೆ ಸೂಚಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries