HEALTH TIPS

ಬ್ರಹ್ಮಶ್ರೀ ತಂತ್ರಿ ಉರ್ಮಿ ವಾಸುದೇವ ನಲ್ಲೂರಾಯ ಅವರಿಗೆ ಶ್ರದ್ಧಾಂಜಲಿ

               ಕುಂಬಳೆ:  ಶ್ರೀ ನಾಗಬ್ರಹ್ಮ, ಮಲರಾಯಿ ಮತ್ತು ಪರಿವಾರ ದೈವಗಳ ಮೂಲಸ್ಥಾನ ಚನ್ನಿಕುಡೇಲು ತರವಾಡು ಕುಲಾಲ ಉಪ್ಯಣ್ಣ ಬರಿಯಲ್ಲಿ ನಾಗರಪಂಚಮಿ ಉತ್ಸವವು ನಡೆಯಿತು. ನಂತರ ನಡೆದ ಕುಟುಂಬಸ್ಥರ ಸಭೆಯಲ್ಲಿ ತರವಾಡಿನ ತಂತ್ರಿವರ್ಯ  ಬ್ರಹ್ಮಶ್ರೀ ತಂತ್ರಿ ಉರ್ಮಿ ವಾಸುದೇವ ನಲ್ಲೂರಾಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

                 ಮೂಲಸ್ಥಾನ ಸಮಿತಿ ಅಧ್ಯಕ್ಷ ಚೆನ್ನಪ್ಪ ಕುಲಾಲ್ ಎರುಗಲ್ಲು ಅವರು ಮಾತನಾಡಿ ಪೂಜ್ಯ ತಂತ್ರಿಗಳು ನಮ್ಮ ತರವಾಡಿನ ಮೇಲೆ ಅಪಾರ ಪ್ರೀತಿ ವಿಶ್ವಾಸವಿಟ್ಟಿದ್ದರು, ತರವಾಡಿನ ಪುನರ್ ನಿರ್ಮಾಣ ಸಂದರ್ಭದಲ್ಲಿ ತಂತ್ರಿಗಳು ಪ್ರತಿ ಹಂತದಲ್ಲೂ ಸೂಕ್ತ ನಿರ್ದೇಶನ ನೀಡುವುದರೊಂದಿಗೆ ಅವರೇ ಶ್ರೀ ದೈವದೇವರ ಪ್ರತಿಷ್ಠಾ ಕಾರ್ಯವನ್ನು ನೆರವೇರಿಸಿದ್ದರು. ಅವರಿಗೆ ವಯೋಸಹಜ ಶಾರೀರಿಕ  ನಿಶಕ್ತಿ ಸಮಯದಲ್ಲೂ ಕೂಡ ತಪ್ಪದೆ ತರವಾಡಿನಲ್ಲಿ ನಡೆಯುವ ಪೂಜೆ ಪರ್ವಾದಿ ವೈದಿಕ ಕಾರ್ಯವನ್ನು ತಾವೇ ಮುಂದೆ ನಿಂತು ನಡೆಸಿಕೊಂಡು ಬಂದಿರುವುದು ತರವಾಡಿನ ಮೇಲೆ ಅವರು ಇಟ್ಟಿದ್ದ ಅಗಾಧ  ಪ್ರೀತಿಗೆ ಸಾಕ್ಷಿಯಾಗಿದೆ. ಇವೆಲ್ಲವನ್ನು ನಾವೆಲ್ಲರು ಮರೆಯಲು ಅಸಾಧ್ಯವಾದುದು. ಇಂತಹ ಹಿರಿಯ ತಂತ್ರಿಗಳು ನಮ್ಮನ್ನು ಅಗಲಿರುವುದು ನಮಗೆಲ್ಲರಿಗೂ ಅತೀವ ದು:ಖದ ವಿಷಯವಾಗಿದೆ. ಅವರು ಈ ಹಿಂದೆ ನೀಡಿರುವ ಸಲಹೆ ಹಾಗೂ ನಿರ್ದೇಶನಗಳೆ ನಮಗೆ ಮುಂದೆ ನಡೆಯಬೇಕಾದ ದಾರಿದೀಪವಾಗಿದೆ ಎಂದು ನುಡಿ ನಮನ ಸಲ್ಲಿಸಿದರು. ನಂತರ ಅಗಲಿದ ಬ್ರಹ್ಮಶ್ರೀ ತಂತ್ರಿ ಉರ್ಮಿ ವಾಸುದೇವ ನಲ್ಲೂರಾಯ ಅವರ ಸದ್ಗತಿಗಾಗಿ ಮೌನ ಪ್ರಾರ್ಥನೆಯೊಂದಿಗೆ ಶ್ರೀ ದೇವರಲ್ಲಿ ಪ್ರಾರ್ಥಿಸಲಾಯಿತು. 

              ಕಂಬಾರು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಜಟಾದಾರಿ ದೈವದ ಪಾತ್ರಿ ರಾಮಣ್ಣ ಕುಲಾಲ್ ನಿರ್ಚಾಲ್ ಕೊಡ್ಯಮೆ, ಹೇರೂರು ಶ್ರೀ ಮಹಾವಿಷ್ಣು ದೇವಸ್ಥಾನದ ಶ್ರೀ ದುರ್ಗಾಲಯ ದೈವದ ಪಾತ್ರಿ ಶ್ರೀ ಮಾರಪ್ಪ ಪಾರೆಕೋಡಿ, ಧರ್ಮದೈವ ಶ್ರೀ ಮಲರಾಯಿ ದೈವದ ಪ್ರಧಾನ ಕರ್ಮಿ ನಾರಾಯಣ ಮೂಲ್ಯ ಕೊಮ್ಮುಂಜ ಹಾಗೂ  ಕುಟುಂಬದ ಹಿರಿಯರಾದ ಮಂಜಪ್ಪ ಮೂಲ್ಯ ಪರಪ್ಪು, ಮದನ ಮೂಲ್ಯ ಪುರುಷಮಜಲು, ಈಶ್ವರ ಉಪ್ಪಿನೆ, ಶಂಕರ ಮೂಲ್ಯ ಬೆಜಪ್ಪೆ ಹಾಗೂ ಉಪಾಧ್ಯಕ್ಷ ಐತಪ್ಪ ಕುಲಾಲ್ ಮಂಡೆಕಾಪು ಉಪಸ್ಥಿತರಿದ್ದರು. ಮೂಲಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಕಳತ್ತೂರು ಸ್ವಾಗತಿಸಿ, ಕೋಶಾಧಿಕಾರಿ ಸುಂದರ ಕುಲಾಲ್ ಕಟ್ನಡ್ಕ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ತೇಜಕುಮಾರ್ ಕುಲಾಲ್ ನಾಗತೀರ್ಥ ವಂದಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries