HEALTH TIPS

ವರ್ಕಾಡಿಯಲ್ಲಿ 'ಆಟಿದ ಕೂಟ': ಆಟಿದ ತಿಂಡಿ ತಿನಿಸುಗಳ ಪ್ರದರ್ಶನ, ಆಟಿಕಳೆಂಜ

             ಮಂಜೇಶ್ವರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.)ವರ್ಕಾಡಿ ಒಕ್ಕೂಟ ನೇತೃತ್ವದಲ್ಲಿ ಆಟಿದ ಕೂಟ ಕಾರ್ಯಕ್ರಮ ವರ್ಕಾಡಿ ಕಾಪ್ರಿ ಶಾಲೆಯಲ್ಲಿ ಜರುಗಿತು. 

                  ಒಕ್ಕೂಟದ ಅಧ್ಯಕ್ಷೆ ಪೂರ್ಣಿಮಾ ಎಸ್.ಬೇರಿಂಜ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯೋಜನಾಧಿಕಾರಿ ಶಶಿಕಲ ಸುವರ್ಣ, ಮೇಲ್ವಿಚಾರಕರಾದ ಕೃಷ್ಣಪ್ಪ ಪೂಜಾರಿ, ಕಾಪ್ರಿ ಶಾಲಾ ಮುಖ್ಯ ಶಿಕ್ಷಕಿ ಸುಜಾತ, ವಲಯಾಧ್ಯಕ್ಷ ಸೋಮಶೇಖರ್, ಸ್ಥಾಪಕಾಧ್ಯಕ್ಷ ಭಾಸ್ಕರ ಟೈಲರ್, ಇಸ್ಡೋರ್ ಡಿ.ಸೋಜ, ವಿವಿಧ ಒಕ್ಕೂಟಗಳ  ಅಧ್ಯಕ್ಷರುಗಳಾದ ಚಂದ್ರಹಾಸ ಶೆಟ್ಟಿ, ದಿನೇಶ್ ಪಾವೂರು, ಆಟಿ ತಿಂಗಳಿನ ಮಹತ್ವದ ಬಗ್ಗೆ ಮಾತನಾಡಿದರು. ಶ್ರೀ ಮಡಿಕತ್ತಾಯ ದೈವಸ್ಥಾನದ ಮೊಕ್ತೇಸರ ವಿ.ಎಸ್ ಬೇರಿಂಜ ಅವರು ಮಾತನಾಡಿ ತುಳು ನಾಡು, ತುಳುವರ ಜೀವನ ಶೈಲಿ, ಸಾಂಪ್ರದಾಯಿಕ ಆಚರಣೆಗಳು,  ತಿಂಡಿ ತಿನಿಸುಗಳ ಬಗ್ಗೆ ವಿಚಾರ ಮಂಡಿಸಿದರು.

            ಯೋಜನೆಯ ವರ್ಕಾಡಿ ಒಕ್ಕೂಟದಲ್ಲಿ ಕಳೆದ 12 ವರ್ಷಗಳ ಕಾಲ ಸೇವಾನಿರತರಾಗಿ ದುಡಿದು, ನಿವೃತ್ತಿ ಹೊಂದಿರುವ ಫ್ರಾನ್ಸಿಸ್ ಮೊಂತೆರೋ ದಂಪತಿಯನ್ನು ಗೌರವಿಸಲಾಯಿತು. ಯೋಜನೆಗೆ  ನೂತನ ಸೇವಾನಿರತೆಯಾಗಿ ನಿಯುಕ್ತಿಗೊಂಡಿರುವ ಮಲ್ಲಿಕಾ ಅವರನ್ನು ಸ್ವಾಗತಿಸಲಾಯಿತು. ಯೋಜನೆಯ ಸದಸ್ಯರಿಗೆ ಆಯೋಜಿಸಲ್ಪಟ್ಟ ಸ್ಪರ್ಧೆಗಳ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು.

              ಈ ಸಂದರ್ಭ ಸ್ವತ: ಸದಸ್ಯರು ಮನೆಯಲ್ಲಿ ತಯಾರಿಸಿ ತಂದ ಆಟಿ ತಿಂಗಳ ತಿಂಡಿ ತಿನಸುಗಳನ್ನೊಳಗೊಂಡ ಮಧ್ಯಾಹ್ನದ ಸಾಂಪ್ರದಾಯಿಕ ಭೋಜನ ಏರ್ಪಡಿಸಲಾಗಿತ್ತು.

              ಒಕ್ಕೂಟದ ಮಾಜಿ ಅಧ್ಯಕ್ಷ ರವೀಂದ್ರ ಕುಲಾಲ್ ತನ್ನ ಸ್ವಯಂರಚಿತ ಕವನಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಕಾರ್ಯದರ್ಶಿ ರೇಣುಕ,  ಪದಾಧಿಕಾರಿಗಳಾದ ಚಂದ್ರಶೇಖರ, ಸುಮಿತ್ರ, ಪದ್ಮಲತ ಉಪಸ್ಥಿರಿದ್ದರು. ಪದಾಧಿಕಾರಿ ಯಾದವ ಬಿ. ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries