ಪೆರ್ಲ: ರಂಗಚಿನ್ನಾರಿ ಕಾಸರಗೋಡು ವತಿಯಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಹಾಗೂ ಶೇಣಿ ಶ್ರೀ ಶಾರದಂಬಾ ಹೈಯರ್ ಸೆಕೆಂಡರಿ ಶಾಲಾ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಏರ್ಪಡಿಸುವ ರಂಗ ಕಾರ್ಯಾಗಾರ'ರಂಗ ಸಂಸ್ಕøತಿ'ಕಾರ್ಯಕ್ರಮ ಆ. 8ರಂದು ಬೆಳಗ್ಗೆ 9.30ಕ್ಕೆ ಶಾಲಾ ಸಭಾಂಗಣದಲ್ಲಿ ಜರುಗಲಿದೆ. ಪ್ರಶಸ್ತಿ ವಿಜೇತ ರಂಗ ನಿರ್ದೇಶಕ, ಚಿತ್ರನಟ ಕಾಸರಗೋಡು ಚಿನ್ನಾ ನಿರ್ದೇಶದಲ್ಲಿ ಕಾರ್ಯಾಗಾರ ನಡೆಯಲಿದೆ.
ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ ಜೆ.ಎಸ್ ಸಮಾರಂಭ ಉದ್ಘಾಟಿಸುವರು. ಪ್ರಾಂಶುಪಾಲ ಶಾಸ್ತಾಕುಮಾರ್ ಎ ಅಧ್ಯಕ್ಷತೆ ವಹಿಸುವರು. ರಂಗ ನಿರ್ದೇಶಕ ಉದಯ ಸಾರಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ರಂಗಚಿನ್ನಾರಿ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ, ಶಾಲಾ ಪ್ರಬಂಧಕಿ ಶಾರದಾ ವೈ ಗೌರವ ಉಪಸ್ಥಿತರಿರುವರು. ಡಾ. ಸುಭಾಷ್ ಪಟ್ಟಾಜೆ ಸಮಾರೋಪ ಭಾಷಣ ಮಾಡುವರು.