HEALTH TIPS

ರಾಯಧನ: 'ಸುಪ್ರೀಂ' ತೀರ್ಪಿನಿಂದ ಭಾರಿ ಆರ್ಥಿಕ ಹೊರೆ ಆತಂಕ

 ವದೆಹಲಿ: ಗಣಿಗಾರಿಕೆ ಮತ್ತು ಖನಿಜಗಳಿರುವ ಜಮೀನುಗಳಿಗೆ ಸಂಬಂಧಿಸಿದ ತೆರಿಗೆ ಮತ್ತು ರಾಯಧಾನ ಕುರಿತ ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಗಣಿಗಾರಿಕೆ ಉದ್ಯಮದ ಮೇಲೆ ಭಾರಿ ಪ್ರಮಾಣದ ಆರ್ಥಿಕ ಹೊರೆ ಬೀಳಲಿದೆ ಎಂಬ ಆತಂಕ ಬುಧವಾರ ವ್ಯಕ್ತವಾಗಿದೆ.

ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ, ರಾಜ್ಯಗಳಿಗೆ ಪಾವತಿಬೇಕಾದ ಬಾಕಿ ತೆರಿಗೆ ಮತ್ತು ರಾಯಧನದ ಮೊತ್ತ ₹1.5 ಲಕ್ಷ ಕೋಟಿಯಿಂದ ₹ 2 ಲಕ್ಷ ಕೋಟಿಯಷ್ಟಾಗಬಹುದು ಎಂದು ಅಂದಾಜು ಈ ಆತಂಕಕ್ಕೆ ಕಾರಣ.

'ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಗಣಿಗಾರಿಕೆ, ಉಕ್ಕು, ಇಂಧನ ಹಾಗೂ ಕಲ್ಲಿದ್ದಲು ಕಂಪನಿಗಳ ಮೇಲೆ ಭಾರಿ ಪ್ರಮಾಣದ ಆರ್ಥಿಕ ಹೊರೆ ಬೀಳುವುದು. ಈ ಕ್ಷೇತ್ರಗಳಲ್ಲಿ ಕಾರ್ಯಾಚರಣೆ ನಿರತ ಕಂಪನಿಗಳ ಹೂಡಿಕೆ ಮೇಲೂ ಅಗಾಧ ಪರಿಣಾಮ ಬೀರಲಿದೆ' ಎಂದು ಗಣಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

'ಜಾಗತಿಕ ಮಟ್ಟದಲ್ಲಿ ಗರಿಷ್ಠ ತೆರಿಗೆ ವಿಧಿಸಲಾಗುತ್ತಿರುವ ಕಾರಣ ಗಣಿಗಾರಿಕೆ ಕ್ಷೇತ್ರ ಈಗಾಗಲೇ ತತ್ತರಿಸಿದೆ. ವಿವಿಧ ತೆರಿಗೆಗಳನ್ನು ವಿಧಿಸುವುದಕ್ಕೆ ಸುಪ್ರೀಂ ಕೋರ್ಟ್‌ನ ಜುಲೈ 25ರ ತೀರ್ಪು ರಾಜ್ಯಗಳಿಗೆ ಅಂಕೆಯಿಲ್ಲದ ಅಧಿಕಾರ ನೀಡಲಿದೆ' ಎಂದು ಭಾರತೀಯ ಗಣಿ ಕೈಗಾರಿಕೆಗಳ ಒಕ್ಕೂಟ (ಎಫ್‌ಐಎಂಐ)ದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಭಾಟಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries