HEALTH TIPS

ಆಟೋರಿಕ್ಷಾಗಳು ಇನ್ನು ಕೇರಳದಾದ್ಯಂತ ಸಂಚರಿಸಬಹುದು: ಸಿಐಟಿಯು ಒತ್ತಡಕ್ಕೆ ಮಣಿದು ಸರ್ಕಾರದ ನಿರ್ಧಾರ

               ತಿರುವನಂತಪುರಂ: ಕೇರಳದಾದ್ಯಂತ ಸಂಚರಿಸಲು ಇನ್ನು ಮುಂದೆ ರಾಜ್ಯದ ಆಟೋ ರಿಕ್ಷಾಗಳಿಗೆ ಪರ್ಮಿಟ್ ನೀಡಲಾಗುವುದು.

            ಅಪಘಾತದ ಪ್ರಮಾಣ ಹೆಚ್ಚಾಗಲಿದೆ ಎಂಬ ಎಚ್ಚರಿಕೆಯನ್ನು ತಿರಸ್ಕರಿಸಿ ರಾಜ್ಯ ಸಾರಿಗೆ ಸಂಸ್ಥೆಯ ನಿರ್ಧಾರವನ್ನು ರಾಜ್ಯ ಸಾರಿಗೆ ಸಂಸ್ಥೆ ಸರ್ಕಾರ ಪರ ಸಂಘಟನೆ ಸಿಐಟಿಯುನ ಬೇಡಿಕೆಗೆ ಸೋತು ಸರ್ಕಾರ ಕೈಗೊಂಡಿದೆ. 

              ಜಿಲ್ಲೆಯ ಗಡಿಯಿಂದ ಕೇವಲ 20 ಕಿ.ಮೀ ದೂರದವರೆಗೆ ಮಾತ್ರ ಆಟೋರಿಕ್ಷಾಗಳಿಗೆ ಈವರೆಗೆ ಪರ್ಮಿಟ್ ನೀಡಲಾಗಿತ್ತು.

             ದೂರದ ಸೇವೆಗಳಲ್ಲಿ ಆಟೋಗಳನ್ನು ಚಲಾಯಿಸುವುದರಿಂದ ಅಪಾಯವಿದೆ ಎಂಬ ಕಾರಣಕ್ಕಾಗಿ ಪರ್ಮಿಟ್ ಅನ್ನು ನಿಬರ್ಂಧಿಸಲಾಗಿತ್ತು.

            ಆದರೆ, ಸಿಐಟಿಯು ಪದೇ ಪದೇ ಪರವಾನಿಗೆಯಲ್ಲಿ ಸಡಿಲಿಕೆ ಕೇಳುತ್ತಿತ್ತು. ದೂರದ ಪ್ರಯಾಣಕ್ಕೆ ಆಟೋ ರಿಕ್ಷಾ ಸೂಕ್ತ ವಾಹನವಲ್ಲ. ಸೀಟ್ ಬೆಲ್ಟ್ ನಂತಹ ವ್ಯವಸ್ಥೆಗಳಿಲ್ಲ. ಹೊಸ ವಾಹನಗಳು ಅತಿವೇಗದ ರಸ್ತೆಗಳಲ್ಲಿ ಸಂಚರಿಸುವಾಗ ಆಟೊಗಳ ದೂರದ ಸೇವೆಯಿಂದ ಭಾರಿ ಅಪಘಾತಗಳು ಸಂಭವಿಸುತ್ತವೆ ಎಂದು ಮೋಟಾರು ವಾಹನ ಇಲಾಖೆ ಅಧಿಕಾರಿಗಳ ಸಭೆಯು ಸೂಚಿಸಿದೆ. ರಸ್ತೆಗಳಲ್ಲಿ ಗರಿಷ್ಠ ವೇಗವನ್ನು 50 ಕಿ.ಮೀ.ಮಿತಿಗೊಳಿಸಲೂ ಸೂಚಿಸಲಾಗಿತ್ತು.

            ಸಾರಿಗೆ ಪ್ರಾಧಿಕಾರದ ಸಭೆಯ ಚರ್ಚೆಯಲ್ಲಿ ಪಾಲ್ಗೊಂಡವರು ಅಪಾಯದ ಬಗ್ಗೆಯೂ ಗಮನ ಸೆಳೆದರು. ಆದರೆ ಪ್ರಾಧಿಕಾರವು ಇದನ್ನೆಲ್ಲ ತಿರಸ್ಕರಿಸಿ, ಆಟೊಗಳಿಗೆ ದೀರ್ಘ ದೂರದ ಪರ್ಮಿಟ್ ನೀಡಲು ನಿರ್ಧರಿಸಿದ್ದು, ಸಾರಿಗೆ ಆಯುಕ್ತರು, ಸಂಚಾರ ಉಸ್ತುವಾರಿ ಐಜಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ನಿರ್ಧಾರ ಕೈಗೊಂಡಿದ್ದಾರೆ.

             ಆಟೋರಿಕ್ಷಾ ಯೂನಿಯನ್ ನ ಸಿಐಟಿಯು ಕಣ್ಣೂರು ಮಾತಾಯಿ ಪ್ರದೇಶ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಚಾಲಕರು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂಬ ಲಘು ನಿಯಮಗಳೊಂದಿಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries