HEALTH TIPS

ನಾಳೆ ಪೆರ್ಲ ನಾಲಂದ ಕಾಲೇಜಿನಲ್ಲಿ ರಂಗ ಸಂಸ್ಕೃತಿ ಕಾರ್ಯಾಗಾರ

              ಪೆರ್ಲ: ರಂಗಚಿನ್ನಾರಿ ಕಾಸರಗೋಡು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಪೆರ್ಲದ ನಾಲಂದ ಕಲಾಮತ್ತು ವಿಜ್ಞಾನ ಕಾಲೇಜು, ನಾಲಂದ ಚಾರಿಟೇಬಲ್ ಟ್ರಸ್ಟ್  ಸಹಯೋಗದೊಂದಿಗೆ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸುವ ರಂಗ ಕಾರ್ಯಾಗಾರ'ರಂಗ ಸಂಸ್ಕೃತಿ'ಕಾರ್ಯಕ್ರಮ ಆ. 2ರಂದು ಬೆಳಗ್ಗೆ 9.30ಕ್ಕೆ ಕಾಲೇಜು ಸಭಾಂಗಣದಲ್ಲಿ ಜರುಗಲಿದೆ.

              ಕೇರಳ ರಾಜ್ಯ ಕಿರು ಕೈಗಾರಿಕೆಗಳ ಒಕ್ಕೂಟ ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷ ರಾಜಾರಾಮ ಎಸ್. ಪೆರ್ಲ ಸಮಾರಂಭ ಉದ್ಘಾಟಿಸುವರು. ಕಾಲೇಜು ಪ್ರಾಂಶುಪಾಲ ಶಂಕರ್ ಖಂಡಿಗೆ ಅಧ್ಯಕ್ಷತೆ ವಹಿಸುವರು. ರಂಗಚಿನ್ನಾರಿ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಗೌರವ ಉಪಸ್ಥಿತರಿರುವರು. ಡಾ. ಶ್ರೀಪತಿಕಜಂಪಾಡಿ ಸಮಾರೋಪ ಭಾಷಣ ಮಾಡುವರು. ರಂಗಚಿನ್ನಾರಿ ನಿರ್ದೇಶಕ, ಚಿತ್ರನಟ ಕಾಸರಗೋಡು ಚಿನ್ನಾ ನಿರ್ದೇಶದಲ್ಲಿ ಕಾರ್ಯಾಗಾರ ನಡೆಯಲಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries