HEALTH TIPS

ಕೆರೆಯಲ್ಲಿ ಸ್ನಾನಗೈದ ನಾಲ್ವರಿಗೆ ತೀವ್ರ ಜ್ವರ: ಒಬ್ಬರಿಗೆ ಎನ್ಸೆಫಾಲಿಟಿಸ್ ಪತ್ತೆ

               ನೆಯ್ಯಾಟಿಂಗರ : ಕೆರೆಯಲ್ಲಿ ಸ್ನಾನ ಮಾಡಿದ ಯುವಕ ಮೆದುಳು ಜ್ವರದಿಂದ ಸಾವನ್ನಪ್ಪಿದ ನಂತರ ಅದೇ ಕೆರೆಯಲ್ಲಿ ಸ್ನಾನಮಾಡಿದ ಇನ್ನೂ 4 ಜನರಿಗೆ ತೀವ್ರ ಜ್ವರ ಕಾಣಿಸಿಕೊಂಡಿದೆ.

               ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರಲ್ಲಿ ಒಬ್ಬರಿಗೆ ಎನ್ಸೆಫಾಲಿಟಿಸ್ ಇರುವುದು ಪತ್ತೆಯಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಆರೋಗ್ಯ ಇಲಾಖೆ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದೆ.

                ಪ್ಲಾವರತಾಳದ ಅನೀಶ್ (26), ಪುತಮಕೋಟ್‌ನ ಅಚ್ಚು (25), ಹರೀಶ್ (27) ಮತ್ತು ಪುತ್ತಮಕೋಟ್ ಬಳಿಯ ಧನುಷ್ (26) ಬೋಧಿನಗರದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಅನೀಶ್ ಗೆ ಮೆದುಳು ಜ್ವರ ಕಾಣಿಸಿಕೊಂಡಿತ್ತು. ಇತರರು ಇದೇ ರೋಗಲಕ್ಷಣಗಳನ್ನು ವರದಿ ಮಾಡಿದ್ದಾರೆ.

                   ಅಖಿಲ್-27 ಕಳೆದ 23 ರಂದು ಕನ್ನರವಿಲ ಪುತಮಕೋಟ್ ನ ಅನುಲಾಲ್ ಭವನದಲ್ಲಿ ಮೃತಪಟ್ಟಿದ್ದರು. ಆರಂಭದಲ್ಲಿ ಮನೆಯ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ತಿರುವನಂತಪುರAನ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ. ಮೆದುಳು ಸೋಂಕಿನಿAದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತರಾಗುವ 10 ದಿನಗಳ ಮೊದಲು ಅಖಿಲ್‌ಗೆ ಜ್ವರ ಬಂದಿತ್ತು. ಅಖಿಲ್ ಮತ್ತು ಇತರರು ಅಟಿಯನ್ನೂರು ಪಂಚಾಯಿತಿಯ ಕನ್ನರವಿಲಾ ಬಳಿಯ ಕವಿಂಕುಳ0 ಕೆರೆಯಲ್ಲಿ  ಸ್ನಾನ ಮಾಡಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries