ಬದಿಯಡ್ಕ: ಬದಿಯಡ್ಕ ನೀರ್ಚಾಲಿನ ಅಕ್ಷಯ ನಿವಾಸದ ಸಿದ್ಧನಕೆರೆ ಶಂಕರ ಭಟ್ಟ(79)ಅವರು ಶುಕ್ರವಾರ ನಿಧನರಾದರು. ಕಾಸರಗೋಡು ತಾಲೂಕು ರೆವೆನ್ಯೂ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ ಪುತ್ರನೊಂದಿಗೆ ನೀರ್ಚಾಲಿನಲ್ಲಿ ಅಕ್ಷಯ ಕೇಂದ್ರವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದರು. ಅವರು ಪತ್ನಿ, ಪುತ್ರನನ್ನು ಅಗಲಿದ್ದಾರೆ.