ಕಾಸರಗೋಡು: ಈ ಬಾರಿಯ ಜಿಲ್ಲಾ ಸ್ವಾತಂತ್ರö್ಯ ದಿನಾಚರಣೆಯಲ್ಲಿ ವಿದ್ಯುತ್ ಸಚಿವ ಕೆ ಕೃಷ್ಣನ್ ಕುಟ್ಟಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸುವರು.
ಮೆರವಣಿಗೆಯಲ್ಲಿ 20 ತುಕಡಿಗಳನ್ನು ನಿಯೋಜಿಸಲಾಗುವುದು. ಜಿಲ್ಲಾ ಸಶಸ್ತ್ರ ಮೀಸಲು ಪೋಲೀಸ್, ಸ್ಥಳೀಯ ಪೋಲೀಸ್, ಮಹಿಳಾ ಪೋಲೀಸ್, ಅಬಕಾರಿ ಮತ್ತು ಅರಣ್ಯ ತುಕಡಿಗಳು, ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ತಚಂಗಾಡ್, ಸರ್ಕಾರಿ ಫಿಶರೀಸ್ ಹೈಯರ್ ಸೆಕೆಂಡರಿ ಶಾಲೆ, ಪಡನ್ನ ಕಡಪ್ಪುರಂ, ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಬಾರಾ, ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ ಇರಿಯಣ್ಣಿ ಮತ್ತು ವಿದ್ಯಾರ್ಥಿ ಪೊಲೀಸ್, ಸರ್ಕಾರಿ ಕಾಲೇಜು, ಕಾಸರಗೋಡು, ವಿಜ್ಞಾನ ಕಾಲೇಜು, ನೆಹರು ಕಲಾ ಮತ್ತು ಹಿರಿಯ ವಿಭಾಗದ ಎನ್ಸಿಸಿ, ದುರ್ಗಾ ಹೈಯರ್ ಸೆಕೆಂಡರಿ ಶಾಲೆ ಕಾಞಂಗಾಡ್ ಜೂನಿಯರ್ ವಿಭಾಗ ಎನ್ಸಿಸಿ ದುರ್ಗಾ ಹೈಯರ್ ಸೆಕೆಂಡರಿ ಶಾಲೆ ಕಾಞಂಗಾಡ್ ಸ್ಕೌಟ್ ಮತ್ತು ಗೈಡ್, ಬಾಲಕಿಯರ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ ಕಾಸರಗೋಡು ಮುಸ್ಲಿಂ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ, ಕಾಸರಗೋಡು ಜೂನಿಯರ್, ರಾಜಾಸ್ ಹೈಯರ್ ಸೆಕೆಂಡರಿ ಶಾಲೆ ನೀಲೇಶ್ವರಂ, ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ ಕಾರಡ್ಕ, ಎನ್ಸಿಸಿ ಜವಾಹರ್ ನವೋದಯ ವಿದ್ಯಾಲಯ ಮತ್ತು ಪೆರಿಯ ಬ್ಯಾಂಡ್ ಸೆಟ್ ಜಿಲ್ಲಾ ಯುವ ಕೇಂದ್ರ ಕಾಸರಗೋಡು ತಂಡ ಕೇರಳ ತುಕಡಿಗಳು ಪರೇಡ್ನಲ್ಲಿ ಭಾಗವಹಿಸಲಿವೆ. ಆಗಸ್ಟ್ 12 ಮತ್ತು 13 ರಂದು ಪರೇಡ್ ರಿಹರ್ಸಲ್ ನಡೆಯಲಿದೆ. ಎಆರ್ ಕ್ಯಾಂಪ್ ಸಹಾಯಕ ಕಮಾಂಡೆAಟ್ ಪರೇಡ್ ನಿಯಂತ್ರಿಸಲಿದ್ದಾರೆ. ಮೆರವಣಿಗೆ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ವಾತಂತ್ರ್ಯ ಹೋರಾಟಗಾರರು, ಜನಪ್ರತಿನಿಧಿಗಳು, ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರು ಸ್ವಾತಂತ್ರ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.