HEALTH TIPS

ಬಾಂಗ್ಲಾದೇಶಕ್ಕೆ ಬಂದಿಳಿದ ವಿಶ್ವಸಂಸ್ಥೆಯ ತಜ್ಞರ ತಂಡ

           ಢಾಕಾ: ಬಾಂಗ್ಲಾದೇಶದಲ್ಲಿ ನಡೆದ ಮೀಸಲಾತಿ ವಿರೋಧಿ ಪ್ರತಿಭಟನೆಯಲ್ಲಿ 650 ಮಂದಿ ಮೃತಪಟ್ಟ ಪ್ರಕರಣದ ಕುರಿತು ತನಿಖೆಯ ರೂಪುರೇಷೆ ಸಿದ್ಧಪಡಿಸಲು ತಜ್ಞರನ್ನು ಒಳಗೊಂಡ ತಂಡವು ಗುರುವಾರ ರಾಜಧಾನಿ ಢಾಕಾಗೆ ಬಂದಿಳಿಯಿತು.

         'ದೌರ್ಜನ್ಯ ಕುರಿತು ತನಿಖೆ ನಡೆಸಲು ಪ್ರಾಥಮಿಕ ಹಂತವಾಗಿ ಈ ತಂಡವು ಬಂದಿಳಿದಿದೆ.

ವಿಶ್ವಸಂಸ್ಥೆಯ ಸತ್ಯಶೋಧನಾ ತಂಡ ಬರುವ ಮುನ್ನ ತನಿಖೆಯ ಚೌಕಟ್ಟು ರೂಪಿಸುವ ನಿಟ್ಟಿನಲ್ಲಿ ಬಾಂಗ್ಲಾದೇಶದೊಂದಿಗೆ ಒಪ್ಪಂದವನ್ನು ಎದುರು ನೋಡುತ್ತಿದ್ದೇವೆ' ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ 'ದಿ ಡೈಲಿ ಸ್ಟಾರ್‌' ಸುದ್ದಿಪತ್ರಿಕೆ ವರದಿ ಮಾಡಿದೆ.

'ಜುಲೈ 1ರಿಂದ ಆಗಸ್ಟ್‌ 15ರ ತನಕ ನಡೆದ ಎಲ್ಲ ಮಾದರಿಯ ಮಾನವ ಹಕ್ಕುಗಳ ಉಲ್ಲಂಘನೆಯ ಬಗೆಗೆ ಹಾಗೂ ತನಿಖೆಗೆ ಪೂರಕವಾದ ನಿಯಮ-ಷರತ್ತುಗಳ ಕುರಿತಂತೆಯೂ ಮಧ್ಯಂತರ ಸರ್ಕಾರದ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದೆ.

             ಒಂದು ವಾರ ತಂಡವು ಢಾಕಾದಲ್ಲಿಯೇ ಉಳಿಯಲಿದ್ದು, ನಾಗರಿಕ ಸಮಾಜದ ಗುಂಪುಗಳು, ಮಾನವ ಹಕ್ಕು ಉಲ್ಲಂಘನೆಯಿಂದ ನೊಂದ ವ್ಯಕ್ತಿಗಳು, ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿದೆ' ಎಂದು ಅವರು ತಿಳಿಸಿದ್ದಾರೆ.

              ತಂಡವು ಬಂದಿರುವುದನ್ನು ಬಾಂಗ್ಲಾದೇಶ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಕೂಡ ಖಚಿತಪಡಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries