HEALTH TIPS

ಶಬರಿಮಲೆಗೆ ಭೇಟಿ ನೀಡಲಿರುವ ಗುಜರಾತ್ ನ 111 ಯಾತ್ರಾರ್ಥಿಗಳ ತಂಡ

ವಡೋದರಾ: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ (ಎಸ್.ಎ.ಎಸ್.ಎಸ್.) ಗುಜರಾತ್ ಘಟಕದ ಆಶ್ರಯದಲ್ಲಿ ಆರಂಭಿಸಲಾಗಿರುವ ಶಬರಿಮಲೆ ಯಾತ್ರೆಯು ಮೂರನೇ ವರ್ಷಕ್ಕೆ ಕಾಲಿಡುತ್ತಿದೆ.

ಸೆಪ್ಟೆಂಬರ್ 16 ಮತ್ತು ಡಿಸೆಂಬರ್ 30 ರಂದು ಗುಜರಾತ್ ನ 37 ಸ್ಥಳೀಯರು ಸೇರಿದಂತೆ 111 ಭಕ್ತರು ದರ್ಶನ ಪಡೆಯಲಿದ್ದಾರೆ. ಮೊದಲ ಬ್ಯಾಚ್ ಸೆಪ್ಟೆಂಬರ್ 15 ರಂದು ಆಗಮಿಸಲಿದೆ.  ಕೇತುನಿರಾ ಗಾಂಧಿಧಾಮ್, ರಾಜ್‍ಕೋಟ್, ಕರ್ಣಾವತಿ (ಅಹಮದಾಬಾದ್), ವಡೋದರಾ, ಸೂರತ್ ಮತ್ತು ವತ್ಸದ್ ನಗರಗಳ ಭಕ್ತರು ತಮಡದಲ್ಲಿದ್ದಾರೆ. 

ಗುಜರಾತಿ ಯಾತ್ರಿಕರ ಮನೆಗಳಲ್ಲಿ ಅಯ್ಯಪ್ಪ ಸ್ವಾಮಿಯ ಚಿತ್ರ, ಶರಣ ಘೋಷ, ಅಯ್ಯಪ್ಪ ಸ್ತುತಿ ಮತ್ತು ವಿಷ್ಣು ಸಹಸ್ರನಾಮ ಒಳಗೊಂಡ ಗುಜರಾತಿ ಪುಸ್ತಕಗಳನ್ನು ಸಹ ವಿತರಿಸಲಾಗಿತ್ತು. 

ಕಚ್ (ಗಾಂಧಿಧಾಮ್) ನಿಂದ ಸೂರತ್ ಮತ್ತು ವತ್ಸದ್ ವರೆಗಿನ ಎಲ್ಲಾ ಪ್ರಮುಖ ನಗರಗಳ ಯಾತ್ರಾರ್ಥಿಗಳು 41 ದಿನಗಳ ವ್ರತಾನುಷ್ಠಾನದ ಮೂಲಕ ಶಬರಿಮಲೆಗೆ ಭೇಟಿ ನೀಡಲು ತಯಾರಾಗುತ್ತಾರೆ. ಸೆಪ್ಟೆಂಬರ್ 18 ರಂದು ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನದ ನಂತರ ಪದ್ಮನಾಭಸ್ವಾಮಿ ದೇವಸ್ಥಾನ, ಗುರುವಾಯೂರ್, ಆರ್ಷ ವಿದ್ಯಾ ಸಮಾಜ ಕೇಂದ್ರ, ಕನ್ಯಾಕುಮಾರಿ, ರಾಮೇಶ್ವರಂ, ಮಧುರೈ ಮೀನಾಕ್ಷಿ, ಶ್ರೀರಂಗಂಗಳಿಗೆ ಭೇಟಿ ನೀಡಿ ಗುಜರಾತ್‍ಗೆ ಹಿಂತಿರುಗುವರು.

ಶಬರಿಮಲೆ ಅಯ್ಯಪ್ಪ ಸೇವಾಸಮಾಜದ ರಾಷ್ಟ್ರೀಯ ಕಾರ್ಯದರ್ಶಿ ಪ್ರಭಾಕರನ್. ಸಿ ಮತ್ತು ಗುರುಸ್ವಾಮಿಗಳ ನೇತೃತ್ವದಲ್ಲಿ ಯಾತ್ರಾರ್ಥಿ ಗುಂಪು ಶಬರಿಮಲೆ ತಲುಪುತ್ತದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries