ಜಕಾರ್ತ: ಭಾರೀ ಮಳೆಯಿಂದ ಉಂಟಾದ ಭೂಕುಸಿತದ ನಂತರ ಇಂಡೋನೇಷ್ಯಾದ Indonesia ಸುಮಾತ್ರಾ ಪ್ರಾಂತ್ಯದಲ್ಲಿ ಚಿನ್ನದ ಗಣಿ ಕುಸಿದು 15 ಮಂದಿ ಸಾವನ್ನಪ್ಪಿದ್ದಾರೆ. ರಕ್ಷಣಾ ಅಧಿಕಾರಿಗಳು ಭೂ ಕುಸಿತದಲ್ಲಿ ಸಿಲುಕಿದವರನ್ನು ಪತ್ತೆಹಚ್ಚಲು ಹರಸಾಹಸ ಮಾಡುತ್ತಿದ್ದಾರೆ. ಶುಕ್ರವಾರದವರೆಗೆ ಇದುವರೆಗೂ 7 ಜನರು ಇನ್ನೂ ನಾಪತ್ತೆಯಾಗಿದ್ದಾರೆ.
ಭಾರೀ ಮಳೆಯಿಂದಾಗಿ ಗುರುವಾರ ಸಂಜೆ ಭೂಕುಸಿತದ ನಂತರ ಸೊಲೊಕ್ ಜಿಲ್ಲೆಯ ಅಕ್ರಮ ಚಿನ್ನದ ಗಣಿ ಕುಸಿದಿದೆ ಎಂದು ಪ್ರಾಂತೀಯ ವಿಪತ್ತು ಏಜೆನ್ಸಿಯ ಮುಖ್ಯಸ್ಥ ಇರ್ವಾನ್ ಎಫೆಂಡಿ ಹೇಳಿದ್ದಾರೆ. ರಸ್ತೆಯ ಮೂಲಕ ಪ್ರವೇಶಿಸಲಾಗದ ಸ್ಥಳಕ್ಕೆ ಹೋಗಲು ರಕ್ಷಕರು ಎಂಟು ಗಂಟೆಗಳ ಕಾಲ ಚಾರಣ ಮಾಡಬೇಕು ಎಂದು ಇರ್ವಾನ್ ರಾಯಿಟರ್ಸ್ಗೆ ತಿಳಿಸಿದ್ದಾರೆ.
ಈ ಘಟನೆಯ ಸಮಯದಲ್ಲಿ ಗಣಿಯಲ್ಲಿ 25 ಜನರಿದ್ದರು ಎಂದು ಅವರು ಅಂದಾಜಿಸಿದ್ದಾರೆ, ಅವರಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ, ಆದರೆ ಮೂವರು ಗಾಯಗೊಂಡಿದ್ದಾರೆ ಮತ್ತು 7 ಮಂದಿ ಕಾಣೆಯಾಗಿದ್ದಾರೆ. ಮೃತರನ್ನು ಸ್ಥಳಾಂತರಿಸುವ ಕ್ರಮಗಳ ಜೊತೆಗೆ ಕಾಣೆಯಾದವರಿಗಾಗಿ ಇಂದು ಮುಂಜಾನೆ ಪೊಲೀಸರು ಮತ್ತು ಮಿಲಿಟರಿ ಹುಡುಕಾಟವನ್ನು ಪ್ರಾರಂಭಿಸಿದರು.
ಸಣ್ಣ-ಪ್ರಮಾಣದ ಮತ್ತು ಅಕ್ರಮ ಗಣಿಗಾರಿಕೆಯು ಇಂಡೋನೇಷ್ಯಾದಲ್ಲಿ ಅಪಘಾತಗಳನ್ನು ಉಂಟುಮಾಡುತ್ತದೆ, ಅಲ್ಲಿ ಖನಿಜ ಸಂಪನ್ಮೂಲಗಳು ದೂರದ ಪ್ರದೇಶಗಳಲ್ಲಿ ಅಧಿಕಾರಿಗಳು ನಿಯಂತ್ರಿಸಲು ಕಷ್ಟಕರವಾದ ಪರಿಸ್ಥಿತಿಗಳಲ್ಲಿ ನೆಲೆಗೊಂಡಿವೆ. ಗುರುವಾರ ಸುಮಾತ್ರಾ ದ್ವೀಪದಲ್ಲಿ ಭೂಕುಸಿತ ಸಂಭವಿಸಿದಾಗ ಗ್ರಾಮಸ್ಥರು ಚಿನ್ನದ ಧಾನ್ಯಗಳನ್ನು ಅಗೆಯುತ್ತಿದ್ದರು, ಅವರು ಸಮಾಧಿಯಾಗಿದ್ದಾರೆ.
ಜುಲೈನಲ್ಲಿ ಸುರಿದ ಧಾರಾಕಾರ ಮಳೆಯಿಂದ ಉಂಟಾದ ಭೂಕುಸಿತದಿಂದ ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿ ಅನಧಿಕೃತ ಚಿನ್ನದ ಗಣಿಗಾರಿಕೆ ಕಾರ್ಯಾಚರಣೆಯ ಮೇಲೆ ಅಪ್ಪಳಿಸಿತು. ಈ ಅವಘಡದಲ್ಲಿ 23 ಜನರು ಸಾವನ್ನಪ್ಪಿದ್ದರು.
ಭೂಕುಸಿತಗಳು, ಪ್ರವಾಹಗಳು ಮತ್ತು ಸುರಂಗಗಳ ಕುಸಿತಗಳು ಗಣಿಗಾರರು ಎದುರಿಸುತ್ತಿರುವ ಕೆಲವು ಅಪಾಯಗಳಾಗಿವೆ. ಹೆಚ್ಚಿನ ಚಿನ್ನದ ಅದಿರು ಸಂಸ್ಕರಣೆಯು ಹೆಚ್ಚು ವಿಷಕಾರಿ ಪಾದರಸ ಮತ್ತು ಸೈನೈಡ್ ಅನ್ನು ಒಳಗೊಂಡಿರುತ್ತದೆ. ಇದೇ ರೀತಿ 2019 ರಲ್ಲಿ ಫೆಬ್ರವರಿಯಲ್ಲಿ ಉತ್ತರ ಸುಲವೆಸಿ ಪ್ರಾಂತ್ಯದ ಅಕ್ರಮ ಚಿನ್ನದ ಗಣಿಯಲ್ಲಿ ಮಣ್ಣು ಕುಸಿದಿತ್ತು. ಇದರಿಂದ 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.