HEALTH TIPS

ಅಕ್ಟೋಬರ್ 1 ರಂದು, ಖಜಾನೆಗಳಲ್ಲಿ ನಗದು ವಹಿವಾಟು ಪ್ರಾರಂಭದಲ್ಲಿ ವಿಳಂಬ:ಪ್ರಕಟಣೆ ನೀಡಿದ ಖಜಾನೆ ನಿರ್ದೇಶಕ

ತಿರುವನಂತಪುರಂ: ಅಕ್ಟೋಬರ್ 1ರಂದು ರಾಜ್ಯದ ಖಜಾನೆಗಳಲ್ಲಿ ಬೆಳಗಿನ ಹಣದ ವಹಿವಾಟು ಆರಂಭವಾಗುವುದು ತಡವಾಗಲಿದೆ ಎಂದು ಖಜಾನೆ ಇಲಾಖೆ ಮಾಹಿತಿ ನೀಡಿದೆ.

ಸೆಪ್ಟೆಂಬರ್ 30 ರಂದು ತ್ರೈಮಾಸಿಕ ಅಂತ್ಯಗೊಳ್ಳುವುದರಿಂದ, ಎಲ್ಲಾ ರಾಜ್ಯ ಖಜಾನೆಗಳ ನಗದು ಬಾಕಿಯನ್ನು ಏಜೆನ್ಸಿ ಬ್ಯಾಂಕ್‍ಗೆ ಪೂರ್ಣವಾಗಿ ಮರುಪಾವತಿಸಬೇಕಾಗಿದೆ.

ಇದರ ನಂತರ, ಅಕ್ಟೋಬರ್ 1 ರ ಬೆಳಿಗ್ಗೆ, ಮರುದಿನ, ಏಜೆನ್ಸಿ ಬ್ಯಾಂಕ್‍ಗಳಿಂದ ಹಣ ಲಭ್ಯವಾದ ನಂತರವೇ ವಹಿವಾಟುಗಳನ್ನು ಪ್ರಾರಂಭಿಸಬೇಕಾಗಿದೆ.  ಈ ಸಂದರ್ಭದಲ್ಲಿ ಪಿಂಚಣಿ ಮತ್ತು ಉಳಿತಾಯ ಬ್ಯಾಂಕ್ ಮೂಲಕ ಪಾವತಿಗಳು ಬೆಳಿಗ್ಗೆ ತಡವಾಗಿ ಪ್ರಾರಂಭವಾಗುತ್ತವೆ.

ಖಜಾನೆ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವರು. ಈ ನಿಟ್ಟಿನಲ್ಲಿ ಎಲ್ಲಾ ಗ್ರಾಹಕರು ಖಜಾನೆ ಇಲಾಖೆಯೊಂದಿಗೆ ಸಹಕರಿಸಲು ವಿನಂತಿಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries