HEALTH TIPS

ಪಡಿತರ ಚೀಟಿ ಬಯೋಮೆಟ್ರಿಕ್ ಮಸ್ಟರಿಂಗ್ ಪ್ರಾರಂಭ: ಅ.3 ರಿಂದ ಕಾಸರಗೋಡಲ್ಲಿ

            ತಿರುವನಂತಪುರಂ: ತಾಂತ್ರಿಕ ತೊಂದರೆಯಿಂದ ಸ್ಥಗಿತಗೊಂಡಿದ್ದ ಪಡಿತರ ಚೀಟಿದಾರರ ಬಯೋಮೆಟ್ರಿಕ್ ಮಸ್ಟರಿಂಗ್ ಕಾರ್ಯ ಪುನರಾರಂಭಗೊಂಡಿದೆ.

            ಮೊದಲ ಹಂತದಲ್ಲಿ ತಿರುವನಂತಪುರ ಜಿಲ್ಲೆಯಲ್ಲಿ ಮಸ್ಟರಿಂಗ್ ನಡೆಯಲಿದೆ. ತಿರುವನಂತಪುರಂನಲ್ಲಿ ಇಂದಿನಿಂದ ಸೆಪ್ಟೆಂಬರ್ 24ರವರೆಗೆ ಮಸ್ಟರಿಂಗ್ ನಡೆಯಲಿದೆ.

           ಎರಡನೇ ಹಂತದಲ್ಲಿ ಕೊಲ್ಲಂ, ಆಲಪ್ಪುಳ, ಪತ್ತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಳಂ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಮಸ್ಟರಿಂಗ್ ನಡೆಯಲಿದೆ. ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 1 ರವರೆಗೆ ಮಸ್ಟರಿಂಗ್ ನಡೆಯಲಿದೆ. ಅದರ ನಂತರ ಮೂರನೇ ಹಂತದಲ್ಲಿ ಪಾಲಕ್ಕಾಡ್, ವಯನಾಡ್, ಕೋಝಿಕ್ಕೋಡ್, ಮಲಪ್ಪುರಂ, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಮಸ್ಟರಿಂಗ್ ನಡೆಯಲಿದೆ. ಅಕ್ಟೋಬರ್ 3 ರಿಂದ 8 ರವರೆಗೆ ಈ ಜಿಲ್ಲೆಗಳಲ್ಲಿ ಮಸ್ಟರಿಂಗ್ ವ್ಯವಸ್ಥೆ ಲಭ್ಯವಿರುತ್ತದೆ.

            ಅಕ್ಟೋಬರ್ 31ರೊಳಗೆ ಮಸ್ಟರಿಂಗ್ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಸೂಚನೆ ನೀಡಿದೆ. ಮಾಡದಿದ್ದರೆ ಪಡಿತರ ವಿತರಣೆ ಸ್ಥಗಿತಗೊಳಿಸುವುದಾಗಿಯೂ ತಿಳಿಸಲಾಗಿದೆ. ಅಕ್ಟೋಬರ್ 15ರೊಳಗೆ ಪೂರ್ಣಗೊಳಿಸಲು ರಾಜ್ಯ ನಿರ್ಧರಿಸಿದೆ. 1.10 ಕೋಟಿ ಕಾರ್ಡುದಾರರು ಮಸ್ಟರಿಂಗ್ ಪೂರ್ಣಗೊಳಿಸಬೇಕಾಗಿದೆ. ಕಾರ್ಡ್‍ದಾರರು ಖುದ್ದಾಗಿ ಬಂದು ಬಯೋಮೆಟ್ರಿಕ್ ಮಸ್ಟರಿಂಗ್ ಅನ್ನು ತಮ್ಮ ಬೆರಳನ್ನು ಇಪಿಒಗಳಲ್ಲಿ ಇರಿಸುವ ಮೂಲಕ ಪೂರ್ಣಗೊಳಿಸಬೇಕು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries